ರಾಮನಾಥಪುರ: ಗುಡಿಯಲ್ಲಿರುವ ದೇವರಿಗಿಂತ ಗಡಿಯಲ್ಲಿರುವ ಯೋಧ ಶ್ರೇಷ್ಠನಾಗಿದ್ದು, ಆ ದೇವರ ರಕ್ಷಣಾ ಕಾರ್ಯದಿಂದ ನಾವಿಂದು ನೆಮ್ಮದಿಯಾಗಿ ನಿದ್ರಿಸುವಂ ತಾಗಿದೆ ಎಂದು ಬಸವಾಪಟ್ಟಣ ತೋಂಟ ದಾರ್ಯ ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಗಡಿ ಕಾಯುವ ಯೋಧರಿಗೆ ಕೃತಜ್ಞತೆ ಸಲ್ಲಿಸಿದರು.
ರಾಮನಾಥಪುರ ಹೋಬಳಿ ಲಕ್ಕೂರು ಗ್ರಾಮದಲ್ಲಿ ಸುಮಾರು 60ಲಕ್ಷ ರೂ ವೆಚ್ಚದಡಿ ನೂತನವಾಗಿ ನಿರ್ಮಿಸಿರುವ ಪ್ರಸಿದ್ಧ ಶ್ರೀಸಂಗಮೇಶ್ವರಸ್ವಾಮಿ ದೇವ ಸ್ಥಾನದ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಧರ ಮೇಲಿನ ದಾಳಿಯನ್ನು ಖಂಡಿ ಸಿದ ಸ್ವಾಮೀಜಿ, ಹುತಾತ್ಮ ಯೋಧರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿ ದರು. ದೇವಾಲಯಗಳು ಭಾರತೀಯ ಸನಾತನ ಸಂಸ್ಕøತಿಯ ಪ್ರತೀಕವಾಗಿದ್ದು, ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವ ನಿಗೆ ನೆಮ್ಮದಿ ಹಾಗೂ ನಿರ್ವಹಣೆ ನಮ್ಮೆ ಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಕೆ.ಆರ್.ನಗರ ಕನಕಪೀಠದ ಶ್ರೀಮಹ ದೇವ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ದೇವಸ್ಥಾನಗಳನ್ನು ನಿರ್ಮಾಣ ಮಾಡಿರುವುದರಿಂದ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ. ಇಂತಹ ಪುಣ್ಯ ಭೂಮಿಯಲ್ಲಿ ದೇವಸ್ಥಾನ ನಿರ್ಮಿಸಿರು ವುದು ಸಂತೋಷದ ಸಂಗತಿ. ದೇವರ ಪೂಜೆ ಪ್ರಾರ್ಥನೆಗಳನ್ನು ಪ್ರತಿನಿತ್ಯವು ನಮ್ಮ ಜೀವ ನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಕಲ ಜೀವಾತ್ಮಗಳಿಗೂ ಲೇಸನ್ನು ಬಯ ಸುವ ಮೂಲಕ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿಯ ವಾತಾವರಣದಲ್ಲಿ ಬಾಳಬೇಕು. ನಮ್ಮಲ್ಲಿ ಹಿಂದೂ ಸಂಸ್ಕøತಿ ಉಳಿಯಬೇಕಾದರೆ ಇಂತಹ ಸನಾತನ ಧರ್ಮ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದರು.
ಶಿರಾ ತಾಲೂಕು ಶಿಡ್ಲುಕೋಣ ವಾಲ್ಮೀಕಿ ಸಂಸ್ಥಾನ ಮಠದ ನಿರಂಜನಕುಮಾರ ಸ್ವಾಮೀಜಿ, ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ತಾಪಂ ಸದಸ್ಯ ಜಿ.ಸಿ.ಮಂಜೇಗೌಡ, ಕೃಷ್ಣನಾಯ್ಕ, ದೇವಸ್ಥಾನದ ಸಮಿತಿ ಅಧ್ಯಕ್ಷ ಶಿವಲಿಂಗೇ ಗೌಡ, ಕಾರ್ಯದರ್ಶಿ ಅನಂತರಾಜು, ಉಪಾಧ್ಯಕ್ಷ ಮೋಹನ್, ಖಜಾಂಚಿ ಬಸವರಾಜು, ಸದಸ್ಯರಾದ ನಾಗರಾಜೇ ಗೌಡ, ಚಂದ್ರೇಗೌಡ, ಕಾಳೇಗೌಡ, ವಿಜಯ್, ಗಣೇಶ್ನಾಯ್ಕ, ಜವರ ನಾಯ್ಕ, ಶಂಕರಾಚಾರಿ, ಮಂಜು, ಕರಿ ನಾಯ್ಕ, ಗ್ರಾಪಂ ಅಧ್ಯಕ್ಷೆ ಶಶಿಕಲಾ ಬಸವ ರಾಜು, ಉಪಾಧ್ಯಕ್ಷ ಮಹದೇವಪ್ಪ, ಸದಸ್ಯ ರಾದ ಸ್ವಾಮಿಗೌಡ, ಭಾಗ್ಯಮ್ಮ, ಸುರೇಶ್ ನಾಯ್ಕ, ರಮೇಶ್, ಸುವರ್ಣ, ಪ್ರಕಾಶ್, ನಂಜಯ್ಯ, ಗ್ರಾಮದ ಅಧಿಕಾರಿಗಳಾದ ಸಣ್ಣೇಗೌಡ, ಮುಖಂಡರಾದ ನಾಗರಾಜ ಶೆಟ್ಟಿ, ಕರೀಗೌಡ, ಹುಚ್ಚೇಗೌಡ, ಸಣ್ಣಯ್ಯ, ನಾಗರಜನಯ್ಯ ಮತ್ತಿತರರಿದ್ದರು.