ಕೋವಿ ಕಳವು ಆರೋಪಿಗಳ ಬಂಧನ

ಮಡಿಕೇರಿ: ಮಡಿಕೇರಿಯಲ್ಲಿ ಮನೆ ಬೀಗ ಮುರಿದು ಕೋವಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿರಾಜಪೇಟೆ ತಾಲೂಕು ರುದ್ರಬೀಡು ಗ್ರಾಮದ ಸುಳ್ಳಿಮಾಡ ದೀಪು ಕುಮಾರ್, ಹೆಗ್ಗಳ ಗ್ರಾಮದ ಅಚ್ಚಪಂಡ ಮೊಣ್ಣಪ್ಪ ಅಲಿಯಾಸ್ ದೀಪು, ಟಿ.ಎಂ.ಸುಬೀರ್ ಹಾಗೂ ಮಡಿಕೇರಿ ತಾಲೂಕು ತಾಳತ್ತಮನೆಯ ಕಂಬೆಯಂಡ ಪೊನ್ನಪ್ಪ ಅಲಿಯಾಸ್ ಹರೀಶ ಬಂಧಿತ ಆರೋಪಿಗಳು.

ಆರೋಪಿಗಳು ಕಳೆದ ಮಾ.8ರಂದು ಮಡಿಕೇರಿಯ ಉತ್ತಯ್ಯ ಎಂಬುವರ ಮನೆಯ ಬಾಗಿಲು ಮುರಿದು ಎರಡು ಕೋವಿಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಕೈಗೊಂಡಿದ್ದ ಪೊಲೀ ಸರು ಇಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಅಶೋಕ ಎಂಬಾತ ತಲೆಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಗಳಿಂದ ಒಂಟಿ ನಳಿಕೆಯ ಬಂದೂಕು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.