ಇಂದು ಉದ್ಯೋಗ ಮೇಳ

ಮೈಸೂರು:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಲಕ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಮಳವಳ್ಳಿ, ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಂಯು ಕ್ತಾಶ್ರಯದಲ್ಲಿ ನ.20ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಮಳವಳ್ಳಿ ಕೆಎಸ್‍ಆರ್‍ಟಿಸಿ ಚಾಲಕ ಮತ್ತು ತಾಂತ್ರಿಕ ತರಬೇತಿ ಕೇಂದ್ರದಲ್ಲಿ ಹಮ್ಮಿ ಕೊಳ್ಳಲಾಗಿದೆ. ಉದ್ಯೋಗ ಮೇಳದಲ್ಲಿ ಉಬರ್, ಜಮೋಟೋ, ಸಿಂಪ್ಲಿ ಗ್ರಾಮೀಣ್ ಬಿಜಿನೆಸ್ ಸಲೂಷನ್, ವುಡ್‍ಲ್ಯಾಂಡ್, ಕಣ್ವಗ್ರೂಪ್ಸ್, ಎಸ್.ಬಿ.ಐ ಲೈಫ್‍ಇನ್‍ಶೂರೆನ್ಸ್ ಹಾಗೂ ಇತರೆ ಕಂಪನಿಗಳು ಭಾಗವಹಿಸಲಿವೆ. ಅಭ್ಯರ್ಥಿಗಳು ಪದವಿ, ಡಿಪ್ಲೊಮೊ, ಎಸ್‍ಎಸ್‍ಎಲ್‍ಸಿ, ಪಿಯುಸಿ, ಐ.ಟಿ.ಐ ವಿದ್ಯಾರ್ಹತೆ, ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಮಾಹಿತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಲಕ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಮಳವಳ್ಳಿ ಮೊ.ಸಂಖ್ಯೆ: 9663266889, ದೂ.ಸಂಖ್ಯೆ: 08231-298077, ಜಿಲ್ಲಾ ಉದ್ಯೋಗ ವಿನಿಮಯ ಕಚೆÉೀರಿ ಮಂಡ್ಯ ದೂ.ಸಂಖ್ಯೆ: 08232-220126, ಮೊ.ಸಂಖ್ಯೆ: 9902434485ನ್ನು ಸಂಪರ್ಕಿಸಬಹುದು.