ಗೋಣಿಕೊಪ್ಪಲು: ಕುಮಟೂರು ಗ್ರಾಮದಲ್ಲಿ ರಾತ್ರಿ ತೋಟಕ್ಕೆ ಲಗ್ಗೆ ಇಟ್ಟಿ ರುವ ಕಾಡಾನೆ ಹಿಂಡು ಸುಮಾರು 5 ಎಕರೆಯಷ್ಟು ತೋಟದ ಬಾಳೆ ಬೆಳೆ ನಾಶ ಮಾಡಿವೆ. ಇದರಿಂದ ಗಾಬರಿಗೊಂಡಿ ರುವ ಗ್ರಾಮದ ಕೃಷಿಕರು ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ಒತ್ತಾಯಿಸುತ್ತಿದ್ದಾರೆ.
ಭಾನುವಾರ ರಾತ್ರಿ 16 ಕಾಡಾನೆಗಳಿದ್ದ ಹಿಂಡು ಕುಮಟೂರು ಗ್ರಾಮದ ಕೋಟೃಂ ಗಡ ಮಂದಣ್ಣ, ಹರೀಶ್ ಹಾಗೂ ನಂಜಪ್ಪ ಎಂಬುವವರಿಗೆ ಸೇರಿದ 20 ಎಕರೆ ತೋಟದಲ್ಲಿ 5 ಎಕರೆ ಬೆಳೆಯನ್ನು ಸಂಪೂರ್ಣವಾಗಿ ತಿಂದು ಹಾಕಿವೆ.
ಅಂದಾಜು 25 ಲಕ್ಷ ವೆಚ್ಚದಲ್ಲಿ 20 ಎಕರೆ ಬಾಳೆ ತೋಟ ಮಾಡಿದ್ದರು. ಇದರಲ್ಲಿ ಕಳೆದ ರಾತ್ರಿ ಕಾಡಾನೆಗಳ ಹಿಂಡು 5 ಎಕರೆ ಯಷ್ಟು ತುಳಿದು, ತಿಂದು ನಾಶ ಮಾಡಿವೆ. ಬಾಳೆ ಫಸಲು ಬಿಟ್ಟಿರುವುದರಿಂದ ಹೆಚ್ಚಿನ ನಷ್ಟ ಉಂಟಾಗಿದೆ. ಇದರೊಂದಿಗೆ ಮಿಶ್ರ ಬೆಳೆಯಾಗಿ ಬೆಳೆದಿದ್ದ ಕಾಪಿ, ಅಡಿಕೆ ಗಿಡ ಗಳನ್ನು ಕೂಡ ನಾಶಮಾಡಿವೆ. ತೋಟಕ್ಕೆ ನೀರು ಹಾಯಿಸಲು ಅಲ್ಯುಮಿನಿಯಂ ಪೈಪ್ ನೆಲದಲ್ಲಿ ಅಳವಡಿಸಲಾಗಿದ್ದು ಆನೆ ತುಳಿತಕ್ಕೆ ಒಳಗಾಗಿ ಸುಮಾರು 20 ಪೈಪ್ಗಳು ನಾಶವಾಗಿದೆ.
ಪರಿಹಾರಕ್ಕೆ ರೈತ ಸಂಘ ಒತ್ತಾಯ: ರಾತ್ರಿ ದಾಳಿಗೆ ಇಳಿಯುವ ಆನೆಗಳ ಹಿಂಡಿನ ದಾಂಧಲೆಗೆ ಹೈರಾಣವಾಗಿರುವ ಕೃಷಿಕನಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡು ವಂತೆ ಹಾಗೂ ಆನೆಗಳನ್ನು ಕಾಡಿಗಟ್ಟುವಂತೆ ರೈತ ಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಅವರ ಮುಂದಾಳತ್ವದಲ್ಲಿ ಪ್ರಮುಖರು ಒತ್ತಾಯಿಸಿದ್ದಾರೆ.
ಘಟನೆ ಸ್ಥಳಕ್ಕೆ ತೆರಳಿದ ರೈತ ಮುಖಂಡರು ಗಳು, ನಷ್ಟದ ಬಗ್ಗೆ ಪರಿಶೀಲನೆ ನಡೆಸಿ ದರು. ವಿರಾಜಪೇಟೆ ಡಿಎಫ್ಒ ಮರಿಯಾ ಕ್ರೈಸ್ತರಾಜ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಗಣೇಶ್, ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕು. ನೊಂದ ಕೃಷಿಕನಿಗೆ ನ್ಯಾಯಯುತವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಪರಿಹಾರ ನೀಡುವು ದಾಗಿ ಅಧಿಕಾರಿ ಭರವಸೆ ನೀಡಿದರು. ಕೇಂಬು ಕೊಲ್ಲಿ ಮೂಲಕ ಪೇರ್ಮಾಡು ಮಾರ್ಗ ವಾಗಿ ಕಾಡಾನೆಗಳು ಬರುತ್ತವೆ. ಇದನ್ನು ನಿಯಂತ್ರಿಸಲು ಅರಣ್ಯ ಗಡಿಗಳಲ್ಲಿ ರೈಲ್ವೆ ಕಂಬಿ ನಿರ್ಮಿಸಬೇಕು ಎಂದು ರೈತ ಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಆಗ್ರಹಿಸಿದ್ದಾರೆ.
ರೈತಸಂಘದ ವತಿಯಿಂದ ನಡೆದ ಪರಿಶೀಲನೆ ಸಂದರ್ಭ ರೈತ ಮುಖಂಡರು ಗಳಾದ ಚಂಗುಲಂಡ ರಾಜಪ್ಪ, ಕುಂಞಂಗಡ ಸಿದ್ದು, ಕಳ್ಳಿಚಂಡ ಧನು, ಮಚ್ಚಮಾಡ ರಂಜಿ, ಐಯ್ಯಮಾಡ ಹ್ಯಾರಿ, ಮಾಣೀರ ದೇವಯ್ಯ, ದೇಕಮಾಡ ವಿನು, ಚೊಟ್ಟೆಯಂಡಮಾಡ ಮಂಜು, ಪ್ರವೀಣ್, ಚೆಟ್ಟಂಗಡ ಲೋಹಿತ್, ಗಗನ್ ಇದ್ದರು.
ಇಂದಿನಿಂದ ಕಾಡಾನೆ ಪತ್ತೆಗೆ ಕಾರ್ಯಾ ಚರಣೆ ಆರಂಭಿಸಲಾಗಿದೆ. ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಪತ್ತೆ ಹಚ್ಚಿ ಕಾಡಿಗೆ ಅಟ್ಟಲು ಯೋಜನೆ ರೂಪಿಸಲಾಗಿದೆ. ಇದರಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ.