ಬದಲಾಗುತ್ತಿರುವ ವ್ಯವಸ್ಥೆಗೆ ತಕ್ಕಂತೆನಾವೂ ನವೀಕೃತಗೊಳ್ಳುವುದು ಅಗತ್ಯ

ಮೈಸೂರು: ಬದ ಲಾಗುತ್ತಿರುವ ವ್ಯವಸ್ಥೆಗೆ ತಕ್ಕಂತೆ ನಾವೂ ಬದಲಾಗಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಹೆಚ್.ವಿ. ರಾಜೀವ್ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಲ್‍ಬಿ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಸೌಹಾರ್ದ ಸಹಕಾರಿಗಳ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳು ಸಂಘಟಿತವಾಗಬೇಕು. ಚಳವಳಿ ಬಲಿಷ್ಠ ಗೊಳಿಸಿ, ಸರ್ಕಾರದ ವಿಮುಖ ನೀತಿಯನ್ನು ಸಂಘಟಿತ ಹೋರಾಟದ ಮೂಲಕ ಎದು ರಿಸಿ, ಈ ಕ್ಷೇತ್ರದಲ್ಲಿ ವಿಶ್ವಾಸ ಮೂಡಿಸು ವುದು ಅಗತ್ಯ. ಹೆಚ್ಚು ಠೇವಣಿ ತರುವುದು, ಹೆಚ್ಚು ಜನರಿಗೆ ಸಾಲ ವಿತರಿಸುವುದು, ಇತ್ಯಾದಿ ಮೂಲಕ ಸಹಕಾರಿ ಕ್ಷೇತ್ರವನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.

ಸಣ್ಣ ಕೈಗಾರಿಕೆಗಳ ಮೂಲಕ ಹೆಚ್ಚು ಉದ್ಯಮಗಳಿಗೆ ಅವಕಾಶವಿದೆ. ಬರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು, ಬದ ಲಾಗುತ್ತಿರುವ ವ್ಯವಸ್ಥೆಗೆ ನಾವೂ ನವೀ ಕರಣಗೊಳ್ಳಬೇಕಿದೆ ಎಂದರು. ಈ ಸಂದರ್ಭದಲ್ಲಿ ಪ್ರಾಂತೀಯ ವ್ಯವಸ್ಥಾಪಕ ನಾರಾಯಣ ಹೆಗಡೆ, ಅಧ್ಯಕ್ಷ ಬಿ.ಹೆಚ್. ಕೃಷ್ಣಾರೆಡ್ಡಿ, ಮಾಜಿ ನಿರ್ದೇಶಕ ಎಂ.ಕೆ. ಸೋಮಯ್ಯ, ಉದ್ದೇಸಿತ ಮೈಸೂರು, ಮಂಡ್ಯ, ಕೊಡಗು ಒಕ್ಕೂಟದ ಅಧ್ಯಕ್ಷ ನವೀನ್ ಇನ್ನಿತರರು ಉಪಸ್ಥಿತರಿದ್ದರು.