ಸೆಲ್ಫಿ ತೆಗೆದುಕೊಳ್ಳುವಾಗ ಮಲ್ಲಳ್ಳಿ ಜಲಪಾತದಲ್ಲಿ ನೀರು ಪಾಲಾದ ಯುವಕನ ಶವ ವಾರದ ನಂತರ ಪತ್ತೆ

ಸೋಮವಾರಪೇಟೆ:  ಮಲ್ಲಳ್ಳಿ ಜಲಪಾತದಲ್ಲಿ ಕಳೆದ ಶುಕ್ರವಾರ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿಬಿದ್ದು, ಮೃತಪಟ್ಟ ಕುಶಾಲನಗರ ಸುಂದರನಗರ ನಿವಾಸಿ ಮನೋಜ್(24)ನ ಮೃತದೇಹ ಶುಕ್ರವಾರ ಪತ್ತೆಯಾಗಿದೆ.

ಮಲ್ಲಳ್ಳಿ ಗ್ರಾಮದ ಕೃಷಿಕ ಮಲ್ಲಪ್ಪ ನೀಡಿದ ಮಾಹಿತಿಯ ನ್ವಯ, ಠಾಣಾಧಿಕಾರಿ ಎಂ.ಶಿವಣ್ಣ ನೇತೃತ್ವದ ತಂಡ ನದಿ ಯಲ್ಲಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಲಪಾತದಿಂದ ಒಂದು ಕಿ.ಮೀ. ದೂರದಲ್ಲಿ ಕುಮಾರಧಾರ ನದಿಯ ಬದಿಯಲ್ಲಿ ಬಳ್ಳಿಯೊಂದಕ್ಕೆ ಸಿಲುಕಿಕೊಂಡಿದ್ದ ಮೃತದೇಹವನ್ನು ಹೊರ ತೆಗೆಯಲಾ ಗಿದೆ. ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಎರಡು ಕಿ.ಮೀ. ಕಾಲು ದಾರಿಯಲ್ಲಿ ಶವ ವನ್ನು ಸಾಗಿಸಿ, ನಂತರ ವಾಹನದಲ್ಲಿ ಸೋಮವಾರಪೇಟೆ ಶವಗಾರಕ್ಕೆ ಸಾಗಿಸಿ, ಮರ ಣೋತ್ತರ ಪರೀಕ್ಷೆ ನಡೆಸಲಾಯಿತು. ಕಳೆದ ಎರಡು ದಿನಗಳಿಂದ ಆ ಭಾಗದಲ್ಲಿ ಮಳೆ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದ ರಿಂದ ಮೃತದೇಹ ಶೋಧಕ್ಕೆ ಅಡಚಣೆಯಾಗಲಿಲ್ಲ ಎಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.

ಸ್ಥಳೀಯರಾದ ಪೊನ್ನಪ್ಪ, ನಿಖಿಲ್, ಸೋಮವಾರಪೇಟೆ ಆಟೋ ಚಾಲಕ ಹಸ ನಬ್ಬ, ಪೊಲೀಸ್ ಸಿಬ್ಬಂದಿಗಳಾದ ಶಿವಕುಮಾರ್, ಜಗದೀಶ್, ಕುಮಾರ್, ಸಿದ್ದರಾಮ ಅವರುಗಳು ಶವದ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು.

ಮುಳುಗುತಜ್ಞರಾದ ಹುಣಸೂರಿನ ಫಕೀರಪ್ಪ, ಕುಶಾಲನಗರದ ರಾಮಕೃಷ್ಣ, ಗರಗಂದೂ ರಿನ ಲತೀಫ್ ಅವರುಗಳು ಕಳೆದ ನಾಲ್ಕು ದಿನಗಳ ಕಾಲ ಜಲಪಾತದ ಬಂಡೆಗಳನ್ನು ಇಳಿದು ಹುಡುಕಾಟ ನಡೆಸಿದ್ದರು. ಆದರೂ ಮೃತದೇಹದ ಸುಳಿವು ಸಿಕ್ಕಿರಲಿಲ್ಲ.