150 ಆಟೋ ಚಾಲಕರಿಗೆ 1 ಲೀ. ಉಚಿತ ಪೆಟ್ರೋಲ್ ವಿತರಣೆ

ಮೈಸೂರು, ಜೂ.20(ಆರ್‍ಕೆಬಿ)- ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್ ದರ ಏರಿಕೆ ನೀತಿ ಖಂಡಿಸಿ ದಟ್ಟಗಳ್ಳಿ ವಾರ್ಡ್‍ನ ಯಶವಂತ್ ನೇತೃತ್ವದಲ್ಲಿ ದಟ್ಟಗಳ್ಳಿಯ ಅಮ್ಮ ಸಮುದಾಯ ಭವನದಲ್ಲಿ ಶನಿವಾರ 150 ಆಟೋ ಚಾಲಕರಿಗೆ ತಲಾ 1 ಲೀ. ಉಚಿತ ಪೆಟ್ರೋಲ್ ವಿತರಿಸಲಾಯಿತು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ನಡೆಯಿತು. ಕಾಂಗ್ರೆಸ್‍ನ ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಗುರು ಪಾದಸ್ವಾಮಿ, ಬ್ಲಾಕ್ ಅಧ್ಯಕ್ಷ ಉಮಾಶಂಕರ್, ಚಂದ್ರು ವಿಶ್ವಕರ್ಮ, ತಾಪಂ ಸದಸ್ಯೆ ಮಹ ದೇವಮ್ಮ, ಪ್ರವೀಣ್, ಡೊನಾಲ್ಡ್, ವಕೀಲರಾದ ವಿಜಯಲಕ್ಷ್ಮಿ, ಚರಣ್‍ರಾಜ್, ಸಾತನೂರು ನಾಗೇಶ್, ಹಿನಕಲ್ ಮಂಜು ಹಾಜರಿದ್ದರು.