ಮೈಸೂರು, ಜೂ.20(ಆರ್ಕೆಬಿ)- ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್ ದರ ಏರಿಕೆ ನೀತಿ ಖಂಡಿಸಿ ದಟ್ಟಗಳ್ಳಿ ವಾರ್ಡ್ನ ಯಶವಂತ್ ನೇತೃತ್ವದಲ್ಲಿ ದಟ್ಟಗಳ್ಳಿಯ ಅಮ್ಮ ಸಮುದಾಯ ಭವನದಲ್ಲಿ ಶನಿವಾರ 150 ಆಟೋ ಚಾಲಕರಿಗೆ ತಲಾ 1 ಲೀ. ಉಚಿತ ಪೆಟ್ರೋಲ್ ವಿತರಿಸಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ನಡೆಯಿತು. ಕಾಂಗ್ರೆಸ್ನ ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಗುರು ಪಾದಸ್ವಾಮಿ, ಬ್ಲಾಕ್ ಅಧ್ಯಕ್ಷ ಉಮಾಶಂಕರ್, ಚಂದ್ರು…
ಸರ್ಕಾರದ ಸಹಾಯ ಧನ ಸಂಬಂಧ ಆಟೋ, ಟ್ಯಾಕ್ಸಿ ಚಾಲಕರಲ್ಲಿ ಗೊಂದಲ
May 24, 2020ಆನ್ಲೈನ್ ಅರ್ಜಿ ಸಲ್ಲಿಕೆಗೆ ಬೆಳಕು ಸಂಸ್ಥೆ ನೆರವು ಮೈಸೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಸರ್ಕಾರ 5 ಸಾವಿರ ರೂ. ಸಹಾಯ ಧನ ಘೋಷಿಸಿದೆ. ಆದರೆ ಅದನ್ನು ಪಡೆಯು ವುದು ಹೇಗೆ ಎಂಬುದು ಬಹಳಷ್ಟು ಚಾಲಕರಿಗೆ ತಿಳಿದಿಲ್ಲ. ಹಾಗಾಗಿ ಮೈಸೂರಿನ ಬೆಳಕು ಸಂಸ್ಥೆ ದಿನದಲ್ಲಿ ಮೂರು ಕಡೆ ತಾತ್ಕಾಲಿಕ ಸೇವಾ ಕೇಂದ್ರ ತೆರೆದು, ಸರ್ಕಾರ ನೀಡುವ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಚಾಲಕರಿಗೆ ನೆರವಾಗಿದೆ. ಗನ್ಹೌಸ್ ವೃತ್ತದ ಬಳಿ ಈ ಕಾರ್ಯಕ್ಕೆ ಬಿಜೆಪಿ…
ಮೈಸೂರಲ್ಲಿ ಶಾಲಾ ಮಕ್ಕಳ ಸಾಗಿಸುವ ವಾಹನ ಚಾಲಕರ ಪ್ರತಿಭಟನೆ
June 27, 2019ಮೈಸೂರು: ನಿಗದಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ವಿರುದ್ಧ ತಪಾಸಣೆ ಮಾಡುತ್ತಿರುವ ಸಂಚಾರ ಪೊಲೀಸರ ಕ್ರಮ ಖಂಡಿಸಿ 500ಕ್ಕೂ ಹೆಚ್ಚು ಚಾಲಕರು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಓವಲ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಪಘಾತಗಳು ಹಾಗೂ ಸಾವು-ನೋವುಗಳನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಕಳೆದ ಒಂದು ವಾರ ದಿಂದ ಮೈಸೂರು ನಗರದಾದ್ಯಂತ ಕಾರ್ಯಾ ಚರಣೆ ನಡೆಸಿ ಸಾಮಥ್ರ್ಯಕ್ಕಿಂತ ಹೆಚ್ಚಿನ ಸಂಖ್ಯೆ ಯಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಆಟೋ ಹಾಗೂ ಮಾರುತಿ ಓಮ್ನಿ…
ಆಟೋಗಳಲ್ಲಿ 5 ಶಾಲಾ ಮಕ್ಕಳಿಗೆ ಮಾತ್ರ ಅವಕಾಶ
June 27, 2019ಮೈಸೂರು: ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಆಟೋರಿಕ್ಷಾ ಮತ್ತು ವ್ಯಾನ್ಗಳ ಚಾಲ ಕರು ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಮಕ್ಕಳನ್ನು ಸುರಕ್ಷಿತ ವಾಗಿ ಕರೆದೊಯ್ಯಬೇಕು. 5ಕ್ಕಿಂತ ಹೆಚ್ಚು ಮಕ್ಕಳನ್ನು ಆಟೋಗಳಲ್ಲಿ ಕರೆದೊಯ್ಯುವಂತಿಲ್ಲ. ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ದು ಕಾನೂನು ಉಲ್ಲಂಘಿಸುವ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡದ ಜೊತೆಗೆ ಚಾಲಕರ ಚಾಲನಾ ಪರವಾನಗಿ ಪತ್ರವನ್ನು ಅಮಾನತುಗೊಳಿಸಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಆಟೋ ಚಾಲಕರಿಗೆ ಎಚ್ಚರಿಸಿದರು. ಮೈಸೂರು ನಗರ ಪೊಲೀಸ್ ಆಯು ಕ್ತರ…
ಆಟೋ ಚಾಲಕನಿಂದ ಪ್ರಯಾಣಿಕನ ಸುಲಿಗೆ
July 5, 2018ಮೈಸೂರು: ಅಪರಿಚಿತ ಆಟೋ ಚಾಲಕನೊಬ್ಬ, ಪ್ರಯಾಣಿಕರೊಬ್ಬರಿಂದ ಹೆಚ್ಚಿನ ಹಣ ಕೀಳಲು ಯತ್ನಿಸಿ, ಕೊಡದೇ ಇದ್ದಾಗ ಅವರ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆಆರ್ಎಸ್ ರಸ್ತೆಯ ದಾಸಪ್ಪ ವೃತ್ತದ ಬಳಿ ನಡೆದಿದೆ. ಮೇಟಗಳ್ಳಿ ನಿವಾಸಿ ಸದಾನಂದ ಜೇವೂರ ಸುಲಿಗೆಗೊಳಗಾದ ಪ್ರಯಾಣಿಕ. ಮಂಗಳವಾರ ರಾತ್ರಿ 11.45ರ ವೇಳೆಗೆ ಮೇಟಗಳ್ಳಿಯ ತಮ್ಮ ನಿವಾಸಕ್ಕೆ ಹೋಗಲು ಬಸ್ ಸಿಗದ ಹಿನ್ನೆಲೆಯಲ್ಲಿ ಆಟೋರಿಕ್ಷಾದಲ್ಲಿ ತೆರಳಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಅಪರಿಚಿತ ಆಟೋ ಚಾಲಕ, ಜೇವೂರ ಅವರನ್ನು ಮೇಟಗಳ್ಳಿ ಕರೆದುಕೊಂಡು ಹೋಗಲು ನಿಗದಿತ…