ಜಮೀನು ಮಂಜೂರಾತಿಗೆ ಆಗ್ರಹಿಸಿ ರಾಷ್ಟ್ರಕ್ರಾಂತಿ ಸೇವಾ ದಳ ಪ್ರತಿಭಟನೆ

ಮೈಸೂರು: ರಾಷ್ಟ್ರಕ್ರಾಂತಿ ಫೌಂಡೇಷನ್ ಸಂಸ್ಥೆಗೆ ನಾಡನಹಳ್ಳಿ ಸರ್ವೆ ನಂಬರ್ 131ರಲ್ಲಿ 2 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಆಗ್ರಹಿಸಿ ರಾಷ್ಟ್ರಕ್ರಾಂತಿ ಸೇವಾ ದಳದ ಕಾರ್ಯಕರ್ತರು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈಗಾಗಲೇ ಸದರಿ ಜಮೀನಿನಲ್ಲಿ ಫೌಂಡೇ ಷನ್ ಕಚೇರಿ ಸ್ಥಾಪಿಸಲಾಗಿದೆ. ಈ ವಿಳಾಸದಲ್ಲಿ ಆಧಾರ್ ಸಂಖ್ಯೆ ಹೊಂದಿ ರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆ ಬಗ್ಗೆ 2013-14ರಿಂದ ಈವರೆಗೆ ಸರ್ಕಾರ ದೊಂದಿಗೆ ಪತ್ರ ವ್ಯವಹಾರ ಮಾಡಿರುವ ಬಗ್ಗೆ ದಾಖಲೆಗಳಿರುವುದರಿಂದ ಜಮೀನನ್ನು ರಾಷ್ಟ್ರಕ್ರಾಂತಿ ಫೌಂಡೇಷನ್‍ಗೆ ಮಂಜೂರು ಮಾಡಿಕೊಡು ವಂತೆ ಸೇವಾ ದಳದ ಅಧ್ಯಕ್ಷ ಜಿ.ಎಂ. ಮಹದೇವ ನೇತೃತ್ವದ ಪ್ರತಿಭಟನಾ ಕಾರರು ಆಗ್ರಹಿಸಿ ಆರ್‍ಸಿ ಕಚೇರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.