ಜಮೀನು ಮಂಜೂರಾತಿಗೆ ಆಗ್ರಹಿಸಿ ರಾಷ್ಟ್ರಕ್ರಾಂತಿ ಸೇವಾ ದಳ ಪ್ರತಿಭಟನೆ
ಮೈಸೂರು

ಜಮೀನು ಮಂಜೂರಾತಿಗೆ ಆಗ್ರಹಿಸಿ ರಾಷ್ಟ್ರಕ್ರಾಂತಿ ಸೇವಾ ದಳ ಪ್ರತಿಭಟನೆ

February 16, 2019

ಮೈಸೂರು: ರಾಷ್ಟ್ರಕ್ರಾಂತಿ ಫೌಂಡೇಷನ್ ಸಂಸ್ಥೆಗೆ ನಾಡನಹಳ್ಳಿ ಸರ್ವೆ ನಂಬರ್ 131ರಲ್ಲಿ 2 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಆಗ್ರಹಿಸಿ ರಾಷ್ಟ್ರಕ್ರಾಂತಿ ಸೇವಾ ದಳದ ಕಾರ್ಯಕರ್ತರು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈಗಾಗಲೇ ಸದರಿ ಜಮೀನಿನಲ್ಲಿ ಫೌಂಡೇ ಷನ್ ಕಚೇರಿ ಸ್ಥಾಪಿಸಲಾಗಿದೆ. ಈ ವಿಳಾಸದಲ್ಲಿ ಆಧಾರ್ ಸಂಖ್ಯೆ ಹೊಂದಿ ರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆ ಬಗ್ಗೆ 2013-14ರಿಂದ ಈವರೆಗೆ ಸರ್ಕಾರ ದೊಂದಿಗೆ ಪತ್ರ ವ್ಯವಹಾರ ಮಾಡಿರುವ ಬಗ್ಗೆ ದಾಖಲೆಗಳಿರುವುದರಿಂದ ಜಮೀನನ್ನು ರಾಷ್ಟ್ರಕ್ರಾಂತಿ ಫೌಂಡೇಷನ್‍ಗೆ ಮಂಜೂರು ಮಾಡಿಕೊಡು ವಂತೆ ಸೇವಾ ದಳದ ಅಧ್ಯಕ್ಷ ಜಿ.ಎಂ. ಮಹದೇವ ನೇತೃತ್ವದ ಪ್ರತಿಭಟನಾ ಕಾರರು ಆಗ್ರಹಿಸಿ ಆರ್‍ಸಿ ಕಚೇರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Translate »