ಕಟ್ಟೆಮಳಲವಾಡಿ ಯುವತಿ ಆತ್ಮಹತ್ಯೆ: ಆರೋಪಿ ಪ್ರೇಮಿ ಬಂಧನ

ಹುಣಸೂರು: ಕಟ್ಟೆಮಳಲವಾಡಿಯ ಯುವತಿ ಅರ್ಪಿತಾ ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಪ್ರಿಯಕರನಾಗಿದ್ದ ಅದೇ ಗ್ರಾಮದ ಯುವಕ ಲೋಕೇಶ್ ಗೌಡನನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿದ್ದ ಲೋಕೇಶ್ ಬಳಿಕ ವಿವಾಹ ವಾಗಲು ನಿರಾಕರಿಸಿ ಸಂಪರ್ಕವನ್ನು ಕಡಿದುಕೊಂಡಿದ್ದರಿಂದ ನೊಂದ ಅರ್ಪಿತಾ, ಮನೆಯಲ್ಲಿ ಯಾರೂ ಇಲ್ಲದಾಗ ಮಂಗಳವಾರ ಆತ್ಮಹತ್ಯೆ ಮಾಡಿ ಕೊಂಡಿದ್ದಳು. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಲೋಕೇಶ್ ಗೌಡ ನನ್ನು ಪೆÇೀಲಿಸರು ತಾಲೂಕಿನ ಹನಗೂಡಿನಲ್ಲಿ ಗುರುವಾರ ಬಂಧಿಸಿದ್ದಾರೆ.

ಅರ್ಪಿತಾ ಕಟ್ಟೆಮಳಲವಾಡಿ ಗ್ರಾಮದ ಬಸವರಾಜು ಮತ್ತು ಕಾಂತಮ್ಮ ದಂಪತಿ ಪುತ್ರಿ. ನಮ್ಮ ಮಗಳಿಗೆ ಮೋಸ ಮಾಡಿ ಆತ್ಮಹತ್ಯೆಗೆ ಕಾರಣನಾದ ಅರೋಪಿ ಯುವಕನನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಿ ಎಂದು ಪೆÇೀಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಹಾಗೂ ಅಸ್ಪøಶ್ಯತೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅರೋಪಿ ಲೋಕೇಶ್‍ಗೌಡನನ್ನು ಇಂದು ಹನಗೂಡಿನಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗ್ರಾಮಾಂತರ ಪಿ.ಎಸ್.ಐ ಶಿವಪ್ರಕಾಶ್ ತಿಳಿಸಿದ್ದಾರೆ.