ಹೊಟ್ಟೆ ನೋವು ತಾಳದೆ ಆತ್ಮಹತ್ಯೆ

ವಿರಾಜಪೇಟೆ: ವಿರಾಜಪೇಟೆ ಸಮೀಪದ ಕಡಂಗ ಅರಪಟ್ಟುವಿನಲ್ಲಿ ಮಹಿಳೆ ಯೊಬ್ಬಳು ಹೊಟ್ಟೆ ನೋವು ತಾಳದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿ ರುವುದಾಗಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೂಲಿ ಕಾರ್ಮಿಕರಾಗಿದ್ದ ತಮಿಳರ ಈಶ್ವರಿ(37) ಕಳೆದ 5 ವರ್ಷಗಳ ಹಿಂದೆ ರಮರ್ ಎಂಬಾತನೊಂದಿಗೆ ವಿವಾಹವಾಗಿದ್ದರು. ಕೆಲವು ದಿನಗಳಿಂದ ಈಶ್ವರಿ ಹೊಟ್ಟೆ ನೋವು ನಿಂದ ಬಳಲುತ್ತಿದ್ದರೆನ್ನಲಾಗಿದೆ. ಇದರಿಂದ ಮನನೊಂದು ಡಿ.11 ರಂದು ರಾತ್ರಿ 8 ಗಂಟೆ ಸಮಯದಲ್ಲಿ ಪತಿ ರಮರ್ ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತೆ ಈಶ್ವರಿಯ ತಾಯಿ ಗಿರಿಜ ಅವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಹಿನ್ನಲೆಯಲ್ಲಿ ದೂರು ದಾಖಲಿಸಿದ ಪೊಲೀಸರು ಮಹಜರು ನಡೆಸಿ ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಶವ ಪರಿಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದರು.