ತೊಂಡವಾಡಿ ಪಿಯು ವಿದ್ಯಾರ್ಥಿ ಸಾಧನೆ

ತೊಂಡವಾಡಿ: ತರಕಾರಿ ಮಾರುತ್ತಾ ಕಡು ಬಡತನದಲ್ಲೂ ಗ್ರಾಮೀಣ ಪ್ರತಿಭೆಯೊಂದು ಕಳೆದ ದ್ವಿತೀಯ ಪಿಯುಸಿಯಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಗ್ರಾಮದ ತರಕಾರಿ ವ್ಯಾಪಾರಿ ಬಸವರಾಜ್ ಎಂಬುವರ ಮಗ ಕೆಂಪರಾಜು ಬಿ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ದಲ್ಲಿ 542 ಅಂಕ ಗಳಿಸಿದ್ದಾನೆ. ಕೆಂಪ ರಾಜು ಸಾಧನೆಗೆ ಶಿಕ್ಷಕರು, ಗ್ರಾಮಸ್ಥರು, ಕುಟುಂಬಸ್ಥರು ಅಭಿನಂದಿಸಿದ್ದಾರೆ.