ಶಿವಪುರ ಸತ್ಯಾಗ್ರಹಸೌಧ ಸಮಗ್ರ ಅಭಿವೃದ್ಧಿಗೆ ಕ್ರಮ

ಮದ್ದೂರು:  ಇತಿಹಾಸ ಪ್ರಸಿದ್ಧ ಶಿವಪುರ ಸತ್ಯಾಗ್ರಹಸೌಧದ ಸಮಗ್ರ ಅಭಿ ವೃದ್ಧಿಗೆ ಪುರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾ ಅಧ್ಯಕ್ಷೆ ಉಮಾಪ್ರಕಾಶ್ ತಿಳಿಸಿದರು.

ಶಿವಪುರ ಸತ್ಯಾಗ್ರಹಸೌಧದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸತ್ಯಾಗ್ರಹ ಸೌಧದಲ್ಲಿ ಸ್ವಚ್ಛತೆ ಕಾಪಾಡಲಾಗುವುದು ಮತ್ತು ನೀರಿನ ಕಾರಂಜಿಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ 7 ಶುದ್ಧ ಕುಡಿ ಯುವ ನೀರಿನ ಘಟಕ ತೆಗೆಯುವ ಸಂಬಂಧ ಸಚಿವರು ನಮಗೆ ಸೂಚನೆ ನೀಡಿದ್ದು, ಶೀಘ್ರವಾಗಿ ನೀರಿನ ಘಟಕಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭ ಪುರಸಭಾ ಸದಸ್ಯ ನಿಂಗಯ್ಯ ಸ್ವಂತ ಖರ್ಚಿನಲ್ಲಿ ಶಿವಪುರದ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಉಚಿತ ವಾಗಿ ನೀರಿನ ಕ್ಯಾನ್‍ಗಳನ್ನು ವಿತರಿಸಿದರು.

ಪುರಸಭಾ ಮುಖ್ಯಾಧಿಕಾರಿ ಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಾ, ಸದಸ್ಯರಾದ ನಿಂಗಯ್ಯ, ರಾಮು, ಗ್ರಾಪಂ ಸದಸ್ಯ ಮೋಹನ್, ಟೊಯೋಟೋ ಕಿರ್ಲೋ ಸ್ಕರ್ ಎಂಡಿ ವಿಜಯ್ ಗಾವಾಡಿ, ಪುರಸಭಾ ಅಧಿಕಾರಿ ಎಂ.ಎನ್.ಮಹೇಶ್ ಸೇರಿದಂತೆ ಇನ್ನಿತರರಿದ್ದರು.