ಮೈಸೂರು: ಅಕ್ಷಯ ತೃತೀಯ ಆಚರಣೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ವಿವಿಧ ಆಭರಣಗಳ ಮಳಿಗೆಗಳಲ್ಲಿ ಬುಧವಾರ ಗ್ರಾಹಕರು ಮುಗಿ ಬಿದ್ದು, ಆಭರಣ ಖರೀದಿಸಿದರು. ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆ ಯಲ್ಲಿ ಈ ಬಾರಿ ಅಕ್ಷಯ ತೃತೀಯ ದಿನ ದಂದು ಆಭರಣ ಖರೀದಿಸಲು ಜನರು ಹಿಂದೇಟು ಹಾಕಲಿದ್ದಾರೆ ಎಂಬ ಆತಂಕ ದಲ್ಲಿದ್ದ ವ್ಯಾಪಾರಿಗಳಿಗೆ ನಿರಾಳ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿ ದರೆ ಒಳಿತಾಗಿ, ಸಂಪತ್ತು ವೃದ್ಧಿಯಾಗು ತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಇಂದು ಬೆಳಗಿನಿಂದಲೇ ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ…