ಮೈಸೂರು: ವಿಶ್ವ ಮಧುಮೇಹ ದಿನಾಚರಣೆ ಆಂಗವಾಗಿ ಮೈಸೂರಿನ ಡಾ.ಮೋಹನ್ಸ್ ಡಯಾಬಿಟಿಸ್ ಸ್ಪೆಷಾಲಿಟಿ ಸೆಂಟರ್ ವತಿಯಿಂದ ಭಾನು ವಾರ ಮೈಸೂರಿನಲ್ಲಿ ಮಧುಮೇಹ ಜಾಗೃತಿ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಮೈಸೂರು ಆಕಾಶವಾಣಿ ಎದುರಿನ ಚೆಲು ವಾಂಬ ಪಾರ್ಕ್ನಿಂದ ಆರಂಭವಾದ ಕಾಲ್ನ ಡಿಗೆ ಜಾಥಾ ಒಂಟಿಕೊಪ್ಪಲ್ ವೃತ್ತದಿಂದ ದೇವ ಸ್ಥಾನ ರಸ್ತೆ ಮೂಲಕ ಸಾಗಿತು. ಇದೇ ವೇಳೆ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಸಿ, ನೂರಾರು ಮಂದಿಗೆ ಮಧು ಮೇಹ ಕುರಿತು ಮಾಹಿತಿ ಹಾಗೂ ಆಹಾರ ಕ್ರಮ ಕುರಿತು ಅರಿವು ಮೂಡಿಸಲಾಯಿತು….