ಆಚಾರ್ಯಶಂಕರರು ಈ ಲೋಕದಲ್ಲಿ ಜೀವಿಸಿದ್ದುದು ಕೇವಲ 32 ವರ್ಷಗಳೆಂದು ಹೇಳುತ್ತಾರೆ. ಇಷ್ಟು ಸ್ವಲ್ಪ ಕಾಲದಲ್ಲಿ ಅವರು ಸಾಧಿಸಿದುದು ಅಪಾರ. ಮುಕ್ತಿಕೋಪನಿಷತ್ತಿನಲ್ಲಿ ನೂರೆಂಟು ಉಪನಿಷತ್ತುಗಳ ಹೆಸರುಗಳು ಬರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾದ ಈಶಾವಾಸ್ಯ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ವಿತರೇಯ, ಛಾಂದೋಗ್ಯ, ಬೃಹದಾರಣ್ಯಕ ಎಂಬ ಹತ್ತು ಉಪನಿಷತ್ತುಗಳಿಗೂ ಆಚಾರ್ಯರು ಭಾಷ್ಯಗಳನ್ನು ಬರೆದರು. ಇದು ಭಾರತೀಯ ದಾರ್ಶನಿಕ ಸಾಹಿತ್ಯಕ್ಕೆ ಅನುಪಮ ಕೊಡುಗೆ. ಶ್ರುತಿಸ್ಮೃತಿ ಪುರಾಣಾನಾಮಾಲಯಂ ಕರುಣಾಲಯಮ್ ನಮಾಮಿ ಭಗವತ್ಪಾದ ಶಂಕರಂ ಲೋಕಶಂಕರಮ್|| ಕ್ರಿ.ಶ. ಏಳನೆಯ ಅಥವಾ ಎಂಟನೆಯ ಶತಮಾನದಲ್ಲಿ ಭಾರತದ…