ಮೈಸೂರು: ಇಂದಿನ ಸಮಾಜದಲ್ಲಿ ಇತಿಹಾಸದ ಬಗ್ಗೆ ಬಹುತೇಕ ನಿರಾಸಕ್ತಿ ಮೂಡುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವಾಂಸರೂ ತೀರಾ ವಿರಳವಿದ್ದಾರೆ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಹೇಳಿದರು. ಮೈಸೂರು ವಿಜಯನಗರದ ಭಾರ ತೀಯ ವಿದ್ಯಾಭವನದ (ಬಿವಿಬಿ) ಸಭಾಂಗಣದಲ್ಲಿ ಬಿವಿಬಿ, ಭವನ್ಸ್ ಪ್ರಿಯಂವದ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಸಂಯುಕ್ತಾಶ್ರಯದಲ್ಲಿ ಶನಿ ವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಿವಿಬಿ ಮೈಸೂರು ಕೇಂದ್ರದ ಅಧ್ಯಕ್ಷ ಡಾ. ಎ.ವಿ.ನರಸಿಂಹಮೂರ್ತಿ ಅವರ `ಇತಿಹಾಸದ ನಕ್ಷತ್ರಗಳು’ ಕೃತಿ ಬಿಡುಗಡೆ…