ಅರಸೀಕೆರೆ, ಜೂ.26- ವಯೋವೃದ್ಧರು ಮನೆಯಲ್ಲಿನ ಸಣ್ಣ ಪುಟ್ಟ ವೈಮನಸ್ಸು ಗಳಿಗೆ ಮನನೊಂದು ಮನೆ ಬಿಟ್ಟು ಹೊರ ಬರುತ್ತಿರುವ ಪ್ರಕÀರಣ ಹೆಚ್ಚುತ್ತಿವೆ ಎಂದು ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರಂಗಸ್ವಾಮಿ ಕಳವಳ ವ್ಯಕ್ತಪಡಿಸಿದರು. ಮಕ್ಕಳಾದವರು ಇಂತಹ ಬೆಳವಣಿಗೆ ಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ವಯಸ್ಸಾದ ಪೋಷಕರನ್ನು ಮಾನವೀಯತೆಯಿಂದ ಸಲುಹಬೇಕು. ಮಾನಸಿಕ ಸ್ಥೈರ್ಯ ತುಂಬ ಬೇಕಿದೆ ಎಂದು ಕಿವಿಮಾತು ಹೇಳಿದರು. ನಗರದ ತೆರಿಗೆ ಇಲಾಖೆ ಕಚೇರಿ ಬಳಿ ವಾರಸುದಾರರಿಲ್ಲದೇ ಕಳೆದ 3 ದಿನಗಳಿಂದ ಕಷ್ಟಪಡುತ್ತಿದ್ದ ತುಮಕೂರು ಮೂಲದ…
ಪೊಲೀಸರಿಂದ ಹಕ್ಕಿ-ಪಿಕ್ಕಿ ಜನರ ಗುಡಿಸಲು ತೆರವು: ಡಿಸಿ ಕಚೇರಿ ಮುಂದೆ ಪ್ರತಿಭಟನೆ
June 27, 2019ಹಾಸನ, ಜೂ.26- ತಟ್ಟೆಹಳ್ಳಿಯಲ್ಲಿ ವಾಸವಾಗಿರುವ ಹಕ್ಕಿ ಪಿಕ್ಕಿ ಜನಾಂಗದವರ ಗುಡಿಸಲುಗಳನ್ನು ಪೊಲೀಸರು ರಾತ್ರಿ ಬಂದು ದಿಢೀರ್ ತೆರವುಗೊಳಿಸಿದ್ದಾರೆ. ಪ್ರಶ್ನಿಸಿದ ನಿವಾಸಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಲವತ್ತುಕೊಂಡಿರುವ ಹಕ್ಕಿ-ಪಿಕ್ಕಿ ಜನಾಂಗದವರು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಗುಡಿಸಲುಗಳನ್ನು ಬಲಪ್ರಯೋಗಿಸಿ ತೆರವುಗೊಳಿಸಿದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅವರನ್ನು ಕೂಡಲೇ ಅಮಾನತು ಗೊಳಿಸಬೇಕೆಂದು ಆಗ್ರಹಿಸಿದರು. ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿಯ ಅಂಗಡಿಹಳ್ಳಿಯಲ್ಲಿ 2 ತಲೆಮಾರು ಗಳಿಂದ ವಾಸವಿದ್ದೇವೆ. ಬುಡಕಟ್ಟು ಜನಾಂಗದ ನಾವುಗಳೆಲ್ಲಾ ಅಲೆಮಾರಿಗಳಾಗಿದ್ದೇವೆ. ನಮ್ಮಲ್ಲಿ…
ಸಾಣೇಹಳ್ಳಿ ಶ್ರೀಗಳಿಂದ ಮತ್ತೆ ಕಲ್ಯಾಣ ಕಾರ್ಯಕ್ರಮ
June 24, 2019ಪೂರ್ವಭಾವಿ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಶ್ಲಾಘನೆ ಅರಸೀಕೆರೆ: ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಸುಧಾರಣೆಯೊಂದಿಗೆ ಸಮಾಜದಲ್ಲಿದ್ದ ಅಸಮಾನತೆ ಹೋಗಲಾ ಡಿಸಲು ಹೋರಾಡಿದರು. 21ನೇ ಶತ ಮಾನದಲ್ಲಿ ಸಾಣೇಹಳ್ಳಿ ಶ್ರೀಗಳು ಮತ್ತೆ ಕಲ್ಯಾಣ ಕಾರ್ಯಕ್ರಮ ರೂಪಿಸುವ ಮೂಲಕ ಬಸವಣ್ಣನವರ ತತ್ವ ಆದರ್ಶಗಳನ್ನು ಅನುಷ್ಠಾನಗೊಳಿಸಲು ಹೊರಟಿರುವುದು ಶ್ಲಾಘನೀಯ ಎಂದು ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು. ನಗರದ ಪಾರ್ವತಮ್ಮ ಪರಮೇಶ್ವರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪ ಡಿಸಿದ್ದ `ಮತ್ತೆ ಕಲ್ಯಾಣ ಕಾರ್ಯಕ್ರಮ’ದ ಪೂರ್ವಭಾವಿ ಸಭೆಯಲ್ಲಿ…
ಡಿಸಿ, ಎಸಿ ಕೋರ್ಟ್ಗಳಲ್ಲಿ ಕಾಲಕಾಲಕ್ಕೆ ವಿಚಾರಣೆ: ಅಕ್ರಂಪಾಷ
June 24, 2019ಹಾಸನ, ಜೂ.23- ತಮ್ಮ ಹಾಗೂ ಅಧೀನ ಅಧಿಕಾರಿಗಳ ನ್ಯಾಯಾಲಯದಲ್ಲಿ ಕಾಲ ಕಾಲಕ್ಕೆ ವಿಚಾರಣೆಗಳನ್ನು ನಡೆಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಭರವಸೆ ನೀಡಿದರು. ಜಿಲ್ಲಾ ವಕೀಲರ ಸಂಘದಲ್ಲಿ ಡಿಸಿ, ಎಸ್ಪಿ ಜತೆ ವಕೀಲರು ಹಮ್ಮಿಕೊಂಡಿದ್ದ `ಆಡಳಿತ ಸುಧಾರಣೆ’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಜಿಲ್ಲಾಡಳಿತವು ನ್ಯಾಯಾಂಗ ಇಲಾಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಗ್ರಾಮ ವಾಸ್ತವ್ಯ ಸೇರಿದಂತೆ ಆಡಳಿತ ವ್ಯವಸ್ಥೆ ಸುಧಾರಣೆಗೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೌತಿ ಖಾತೆ ಆಂದೋ ಲನ ಮೂಲಕ…
ಕೃಷಿ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ
June 24, 2019ಪ್ರಚಾರ ಆಂದೋಲನ ವಾಹನಕ್ಕೆ ಬೇಲೂರಿನಲ್ಲಿ ಚಾಲನೆ ಬೇಲೂರು: ಕೃಷಿ ಇಲಾಖೆಯ ವಿವಿಧ ಯೋಜನೆಗಳು ಮತ್ತು ತಂತ್ರಜ್ಞಾನದ ಫಲವನ್ನು ರೈತರ ಜಮೀನಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಮುತುವರ್ಜಿ ವಹಿಸಬೇಕು, ಕೃಷಿಕರಿಗೆ ಅಗತ್ಯ ಮಾಹಿತಿ ಒದಗಿಸಬೇಕು ಎಂದು ಬೇಲೂರು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೇಳಿದರು. ಪಟ್ಟಣದ ನೆಹರು ನಗರದಲ್ಲಿನ ಕೃಷಿ ಇಲಾಖೆ ಕಚೇರಿ ಬಳಿ `ಕೃಷಿ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ’ ಪ್ರಚಾರ ಆಂದೋಲನ ವಾಹನಕ್ಕೆ ಭಾನುವಾರ ಚಾಲನೆ ನೀಡಿದ ಅವರು, ರೈತರು…
ಉದ್ಯಮ ಸಂಸ್ಥೆಗಳ ಪಟ್ಟಿ ಸಿದ್ಧಪಡಿಸಲು ಡಿಸಿ ಸೂಚನೆ
June 24, 2019ಹಾಸನ, ಜೂ.23- ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ, ಸಂಘ ಟಿತ ಮತ್ತು ಅಸಂಘಟಿತ ವಲಯದ, ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿಯನ್ನು ಶೀಘ್ರ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದ್ದಾರೆ. ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ 7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತ ನಾಡಿದ ಅವರು, ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನು ಷ್ಠಾನ ಸಚಿವಾಲಯದ ಮಾರ್ಗದರ್ಶನ ದಡಿ ಈ ಕಾರ್ಯ…
ಹೆಚ್ಡಿಕೆ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆಸೆಸ್ಕ್ ಹಾಸನ ವಲಯ ಕಚೇರಿ, ಮಾಪಕ ಪರೀಕ್ಷಾ ವಿಭಾಗ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ
June 20, 2019ಹಾಸನ, ಜೂ.19- ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರ, ಜನಸಾಮಾನ್ಯರ ಶ್ರೇಯೋಭಿವೃದ್ಧಿ ಹಾಗೂ ರಾಜ್ಯದ ಸಮಗ್ರ ಪ್ರಗತಿಗೆ ಪೂರಕವಾಗಿ ಶ್ರಮಿಸುತ್ತಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು. ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ನೂತನ ಹಾಸನ ವಲಯ ಮತ್ತು ಮಾಪಕ ಪರೀಕ್ಷಾ ವಿಭಾಗವನ್ನು ಉದ್ಘಾಟಿಸಿದ ಅವರು, ನಿರಂತರ ವಿದ್ಯುತ್ ಪೂರೈಕೆ ಕೂಡ ಸರ್ಕಾರದ ಆದ್ಯತೆಗಳಲ್ಲೊಂದು ಎಂದರು. ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯ ಮಿತ…
ಅಮ್ಮನಿಂದ ಬೇರ್ಪಟ್ಟು ತಂತಿ ಬೇಲಿಗೆ ಸಿಲುಕಿದ್ದ 2 ಕರಡಿ ಮರಿಗಳ ರಕ್ಷಣೆ
June 20, 2019* ಅರಸೀಕೆರೆ ತಾಲೂಕಿನ ಜಾಜೂರು ಬಳಿ ಘಟನೆ * ತೋಟದಲ್ಲಿ ಹಂದಿ ಹಿಡಿಯಲು ಅಳವಡಿಸಿದ್ದ ಕುಣಿಕೆ ಅರಸೀಕೆರೆ, ಜೂ.19- ಅರಸೀಕೆರೆ ತಾಲೂಕಿನ ಜಾಜೂರು ವ್ಯಾಪ್ತಿಯ ತೋಟ ವೊಂದರ ತಂತಿ ಬೇಲಿಯಲ್ಲಿ ಅಳವಡಿಸಿದ್ದ ಹಿಂದೆ ಬೇಟೆ ಕುಣಿಕೆಗೆ ಸಿಲುಕಿದ 2 ಕರಡಿ ಮರಿಗಳು, ಕುಣಿಕೆಯಿಂದ ಬಿಡಿಸಿಕೊಳ್ಳಲಾಗದೇ ಇಡೀ ರಾತ್ರಿ ನರಳಾಡಿವೆ. ಬುಧವಾರ ಬೆಳಿಗ್ಗೆ ವಿಷಯ ತಿಳಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಎರಡೂ ಕರಡಿಗಳನ್ನು ರಕ್ಷಿಸಿ ಅರಣ್ಯಕ್ಕೆ ಸಾಗಿಸಿದ್ದಾರೆ. ಆಹಾರ ಅರಸುತ್ತಾ ಮಂಗಳವಾರ ರಾತ್ರಿ ಜಾಜೂರು ಕಡೆ ಬಂದ…
ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಪಬ್ಲಿಕ್ ಶಾಲೆ: ಬಸವಾಪಟ್ಟಣದಲ್ಲಿ ಶಾಲೆ ಉದ್ಘಾಟಿಸಿದ ಶಾಸಕ ಎಟಿಆರ್
June 20, 2019* ಬಸವಾಪಟ್ಟಣ ಪಬ್ಲಿಕ್ ಶಾಲೆ ನಿರ್ವಹಣೆಗೆ 5 ಲಕ್ಷ ರೂ. * ದುರಸ್ತಿಗಾಗಿ 22 ಲಕ್ಷ ರೂ. ಬಸವಾಪಟ್ಟಣ: ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರ 1 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದೆ. ಆ ಮೂಲಕ ಹಳ್ಳಿಗಾಡಿನ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಲು ಸಂಕಲ್ಪ ಮಾಡಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು. ಅರಕಲಗೂಡು ತಾಲೂ ಕಿನ ಬಸವಾಪಟ್ಟಣ ಗ್ರಾಮ ದಲ್ಲಿ ಎಲ್ಕೆಜಿ, 1ನೇ ತರಗತಿಯಿಂದ ದ್ವಿತೀಯ ಪಿಯುವರೆಗೂ ಒಂದೇ ನೆಲೆಯಲ್ಲಿ ಶಿಕ್ಷಣ ನೀಡುವ ಕರ್ನಾಟಕ…
ಜೆಸಿ ಪುರದಲ್ಲಿ ಡಿಸಿ, ಸಿಇಒ ಪ್ರಥಮ ಗ್ರಾಮ ವಾಸ್ತವ್ಯ
June 20, 2019ಶಾಸಕರೂ ಭಾಗಿ; ಜನಸಂಪರ್ಕ ಸಭೆಯಲ್ಲಿ ಸಾವಿರಾರು ಅಹವಾಲು ಹಾಸನ, ಜೂ.19- ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎನ್. ವಿಜಯಪ್ರಕಾಶ್ ಅವರು ಅರಸೀಕೆರೆ ತಾಲೂಕಿನ ಜೆ.ಸಿ.ಪುರದಲ್ಲಿ ಜನಸಂಪರ್ಕ ಸಭೆ ನಡೆಸಿ, ಅಧಿಕಾರಿಗಳ ಜತೆಗೂಡಿ ಗ್ರಾಮ ವಾಸ್ತವ್ಯ ನಡೆಸಿದರು. ಜಿಲ್ಲಾಡಳಿತ ಈ ನೂತನ ಪ್ರಯೋಗಕ್ಕೆ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರೂ ಸಾಥ್ ನೀಡಿದ್ದು ಗಮನ ಸೆಳೆಯಿತು. ಜಿಲ್ಲಾಧಿಕಾರಿ ಅಕ್ರಂ ಪಾಷ ಅವರ ನೇತೃತ್ವದಲ್ಲಿ ಸರ್ಕಾರಿ ಬಸ್ನಲ್ಲೇ ಗ್ರಾಮಕ್ಕೆ ಬಂದ ಅಧಿಕಾರಿಗಳ ದೊಡ್ಡ ತಂಡಕ್ಕೆ ಜೆ.ಸಿ.ಪುರ…