ಮೈಸೂರು: ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದ ಬಳಿ ಕಳೆದ ರಾತ್ರಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಗುಳ್ಳೆನರಿ ಸಾವನ್ನಪ್ಪಿದೆ. ಬೋಗಾದಿ ರಸ್ತೆ- ಹುಣಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಕುಕ್ಕರಹಳ್ಳಿ ಕೆರೆಯಿಂದ ಬಯಲು ರಂಗಮಂದಿರ ದತ್ತ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನರಿ ರಸ್ತೆಯ ಬದಿ ಕೆಲ ಅಡಿ ತೆವಳಿ ಅಸುನೀಗಿದೆ. ಇಂದು ಬೆಳಿಗ್ಗೆ ದಾರಿ ಹೋಕರು ನರಿಯ ಮೃತದೇಹ ಗಮನಿಸಿ, ಅರಣ್ಯ…