ಮಾನ್ಯರೆ, ಮೈಸೂರಿನ ಪ್ರತಿಷ್ಠಿತ ಕೃಷ್ಣರಾಜೇಂದ್ರ (ಕೆ.ಆರ್. ಮಿಲ್ಸ್) ಮಿಲ್ 4.6.1984 ರಂದು ಮುಚ್ಚಿ ಹೋಯಿತು. ಇಲ್ಲಿಯವರೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗೋಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ಸುಮಾರು 3 ಸಾವಿರಕ್ಕಿಂತಲೂ ಹೆಚ್ಚು ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಇದುವರೆಗೂ ಅವರಲ್ಲಿ ಎಷ್ಟು ಮಂದಿ ಮೃತ ಪಟ್ಟಿದ್ದಾರೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಕಾಮನಕೆರೆ ಹುಂಡಿ, ರಮ್ಮನಹಳ್ಳಿ, ಬೆಲವತ್ತ ಗ್ರಾಮ, ಮಂಟಿ, ಕಳಸ್ತವಾಡಿ, ನಾಗನಹಳ್ಳಿ, ನಗುವನಹಳ್ಳಿ, ಸಿದ್ದಲಿಂಗಪುರ, ಕುಂಬಾರಕೊಪ್ಪಲು, ಗಾಂಧಿನಗರ, ಎನ್.ಆರ್. ಮೊಹಲ್ಲಾ…