ಮೈಸೂರು: ಅಪಹರಣವಾಗಿ ನಂತರ ಸುರಕ್ಷಿತವಗಿ ಹಿಂದಿರುಗಿದ ಕೆ.ಆರ್.ಪೇಟೆ ತಹಸೀಲ್ದಾರ್ ಕೆ.ಮಹೇಶ್ಚಂದ್ರ ಅವರ ಪ್ರಹಸನದ ನೈಜ ಸ್ಥಿತಿ 10 ದಿನ ಕಳೆದರೂ ಪತ್ತೆಯಾಗಲಿಲ್ಲ. ಆಗಸ್ಟ್ 3ರಂದು ಕೆಲಸ ಮುಗಿಸಿ ಕೆ.ಆರ್.ಪೇಟೆಯಿಂದ ಕೆ.ಆರ್.ನಗರಕ್ಕೆ ಹೊರಟಿದ್ದ ಮಹೇಶ್ಚಂದ್ರ ಅವರನ್ನು ಮಾರ್ಗ ಮಧ್ಯೆ ಬೇರ್ಯ ಸಮೀಪ ಅಪಹರಿಸಲಾಗಿತ್ತೆಂಬುದು, ಮಾರುತಿ ಓಮ್ನಿ, ಅವರ ಶರ್ಟಿನ ಬಟನ್ಗಳು ಹಾಗೂ ಶೂಗಳು ಪತ್ತೆಯಾದ ಮರುದಿನ ತಿಳಿದು ಬಂದಿತ್ತು. ಕೆ.ಆರ್.ನಗರ, ಸಾಲಿಗ್ರಾಮ ಮತ್ತು ಕೆ.ಆರ್.ಪೇಟೆ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಶೋಧನಾ ಕಾರ್ಯ ಆರಂಭಿಸಿದ್ದರು. ಆಗಸ್ಟ್…