ಮೈಸೂರು: ಜಠರ ಕರುಳಿನ ರಕ್ತಸ್ರಾವ ಚಿಕಿತ್ಸೆಯನ್ನು ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಜಠರ ಕರುಳಿನ ರಕ್ತಸ್ರಾವದ ಬಗ್ಗೆ ರೋಗಿಗಳು ಧೈರ್ಯಗೆಡದಿರುವಂತೆ ಆಸ್ಪತ್ರೆಯ ಮುಖ್ಯ ಗ್ಯಾಸ್ಟ್ರೋ ಎಂಟೆರೋಲಜಿಸ್ಟ್ ಡಾ.ಎ.ಕೆ.ಸತೀಶ್ರಾವ್ ಇಂದಿಲ್ಲಿ ತಿಳಿಸಿದರು. ಪಿತ್ತ ಜನಕಾಂಗದ ಸಮಸ್ಯೆಯಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ಉಬ್ಬಿಕೊಂಡ ರಕ್ತನಾಳಗಳು ಹೊಟ್ಟೆಯಲ್ಲಿಯೇ ಒಡೆದು ಹೋಗುವುದರಿಂದ ರಕ್ತ ವಾಂತಿಯಾಗಲಿದ್ದು, ಈ ಬಗ್ಗೆ ರೋಗಿಗಳು ಧೈರ್ಯಗೆಡದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ…