ಮೈಸೂರು: ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಪೈಪ್ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಒಳಚರಂಡಿ ಪೈಪ್ಲೈನ್ ಬದಲಿಸುವ ಕಾಮಗಾರಿ ಬಳಿಕ ಸಮರ್ಪಕವಾಗಿ ಮಣ್ಣು ಮುಚ್ಚಿರಲಿಲ್ಲ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿತ್ತು. ಈ ಸಂಬಂಧ `ಮೈಸೂರು ಮಿತ್ರ’ ಡಿ.2ರ ಸಂಚಿಕೆಯಲ್ಲಿ `ನಾರಾಯಣ ಶಾಸ್ತ್ರಿ ರಸ್ತೆ ಅವ್ಯವಸ್ಥೆಗೆ ಜನರ ಆಕ್ರೋಶ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಥಳೀಯ ಕಾರ್ಪೊರೇಟರ್(23ನೇ ವಾರ್ಡ್) ಪ್ರಮೀಳಾ ಎಂ.ಭರತ್ ಅವರು, ಯುಜಿಡಿ ಮೇನ್ ಪೈಪ್ಲೈನ್ ಬದಲಿಸುವ ಸಂದರ್ಭದಲ್ಲಿ…