ಮೈಸೂರು: ದೇವಾಲಯದ ಅರ್ಚಕರೂ ಆದ ಛತ್ರವೊಂದರ ಮಾಲೀಕ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ. ಎನ್.ಆರ್.ಮೊಹಲ್ಲಾದ ಗಣೇಶ ದೇವಾಲಯ ರಸ್ತೆಯಲ್ಲಿರುವ ದೊಡ್ಡಮತಾಯಿ ದೇವಾಲಯದ ಅರ್ಚಕ ಹಾಗೂ ದೊಡ್ಡಮ್ಮತಾಯಿ ಛತ್ರದ ಮಾಲೀಕ ರಾಜು(45), ಛತ್ರದ ಹಿಂಭಾಗದಲ್ಲಿರುವ ಬಾತ್ರೂಂನಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎನ್.ಆರ್.ಠಾಣೆ ಪೊಲೀಸರು, ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ರಾಜು ಅವರ ಕುಟುಂಬದವರೆಲ್ಲಾ ಚಾಮರಾಜನಗರಕ್ಕೆ ತೆರಳಿದ್ದು, ವಿಷಯ ತಿಳಿಸಲಾಗಿದೆ. ಸಾಲ ಮಾಡಿಕೊಂಡಿದ್ದ ರಾಜು, ಮನನೊಂದು…