ಮೈಸೂರು: ಅಪ್ರವರಂಭೆ ವತಿಯಿಂದ ಆರಂಭಿಸುತ್ತಿರುವ ರವಿರಂಗ ಶಾಲೆಯ ವಾರಾಂತ್ಯ ತರಬೇತಿಗೆ ಜೂ.10ರಂದು ಆಡಿಷನ್ ನಡೆಸಲಾಗು ವುದು ಎಂದು ಅಪ್ರವರಂಬೆಯ ಕಾರ್ಯದರ್ಶಿ ನಾ.ನಾಗಚಂದ್ರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ರಂಗತರಬೇತಿ, ನಾಟಕೋತ್ಸವ, ವಿಚಾರಸಂಕಿರಣ, ಮಕ್ಕಳ ನಾಟಕೋತ್ಸವ, ರಂಗಕರ್ಮಿಗಳ ಸನ್ಮಾನ ಸೇರಿದಂತೆ ರಂಗಭೂಮಿಗೆ ತನ್ನದೇ ಸೇವೆ ಸಲ್ಲಿಸುತ್ತಿರುವ ಅಪ್ರವರಂಭೆ ಸಂಸ್ಥೆ ಈಗ ರವಿರಂಗ ವಾರಾಂತ್ಯ ರಂಗಶಾಲೆ ಶಿಬಿರವನ್ನು ಆರಂಭಿಸುತ್ತಿದೆ. ರಾಮಕೃಷ್ಣ ನಗರದ ಇ ಮತ್ತು ಎಫ್ ಬ್ಲಾಕ್ನಲ್ಲಿರುವ ನೃಪತುಂಗ ಕನ್ನಡ…