ಮಡಿಕೇರಿ: ಜಗತ್ತಿನ ಪ್ರಮುಖ ಸಾಮಾಜಿಕ ಸೇವಾ ಸಂಸ್ಥೆಯಾಗಿರುವ ರೋಟರಿ ಜೀವನದ ಹಲವು ಪಾಠಗಳನ್ನು ಕಲಿಸುವ ಅಪೂರ್ವ ವಿಶ್ವವಿದ್ಯಾನಿಲಯ ದಂತಿದೆ ಎಂದು ರೋಟರಿ ಜಿಲ್ಲೆ 3181ನ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಹೇಳಿದ್ದಾರೆ. ಮಡಿಕೇರಿ ರೋಟರಿ ಕ್ಲಬ್ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮಾತನಾಡಿದ ಸುರೇಶ್ ಚಂಗಪ್ಪ, ಜೀವನದ ಆಗುಹೋಗು ಗಳೊಂದಿಗೆ ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸಬಲ್ಲ ಶಕ್ತಿ ರೋಟರಿ ಸಂಸ್ಥೆಗಿದೆ ಎಂದು ಶ್ಲಾಘಿಸಿದರು. ಯಾವುದೇ ಕ್ಷೇತ್ರ ದಲ್ಲಿಯೂ ಅಧಿಕಾರ ದೊರಕಿದಾಗ ಅಂಥ ವ್ಯಕ್ತಿಯ ನೈಜ ವ್ಯಕ್ತಿತ್ವ ಬೆಳಕಿಗೆ ಬರುತ್ತದೆ….