ಮೈಸೂರು: ಸುಂದರ ಸಂಜೆಯಲ್ಲಿ ಬಣ್ಣದ ಉಡುಗೆಗಳನ್ನು ತೊಟ್ಟ ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸ ಮನೆ ಮಾಡಿತ್ತು. ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದ ಮಕ್ಕಳು, ನಿರೂಪಣೆ, ಸ್ವಾಗತ, ವಂದನಾರ್ಪಣೆವರೆವಿಗೂ ತಮ್ಮ ತೊದಲು ನುಡಿಗಳಿಂದಲೇ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ತಾವೇ ರಚಿತ ಸ್ವಾಗತ ಹಾಡಿನ ಮೂಲಕ ವಿನೂತನವಾಗಿ ಆಹ್ವಾನಿಸಿದ್ದು ವಿಶೇಷವಾಗಿತ್ತು. ಊಟಿ ರಸ್ತೆಯ ಶಕ್ತಿಧಾಮದಲ್ಲಿ ಚಿಗುರು ಮಕ್ಕಳ ಕಲಾಸಂಸ್ಥೆ ಶನಿವಾರ ಆಯೋಜಿಸಿದ್ದ ಪ್ರೇರಣಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಕ್ಕಳು, ನಿರೂಪಣೆಯ ದಿಟ್ಟತನ ಪ್ರದರ್ಶಿಸಿ ಗಣ್ಯರು ನಿಬ್ಬೆರಗಾಗುವಂತೆ ಮಾಡಿದರು. ಈ…