ಉಮ್ಮತ್ತೂರು: ಚಾಮ ರಾಜನಗರ ತಾಲೂಕಿನ ಉಮ್ಮತ್ತೂರು- ದಾಸನೂರು ರಸ್ತೆಯ ದೊಡ್ಡ ಕೆರೆ ಗೇಟ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಮಾರ್(45) ಮೃತಪಟ್ಟ ವ್ಯಕ್ತಿ. ಈತ ಗ್ರಾಮದ ನಾಯಕರ ಬೀದಿಯ ಬೆಣ್ಣೆ ಸೋಮಣ್ಣನ ಅವರ ಪುತ್ರ. ಕುಮಾರ್ ದಾಸನೂರಿನಿಂದ ಉಮ್ಮತ್ತೂರು ಗ್ರಾಮಕ್ಕೆ ನಡೆದುಕೊಂಡು ಬರುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಇದರಿಂದ ಕುಮಾರ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು ಸಾವನ್ನಪ್ಪಿದ್ದಾರೆ. ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ…