ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಹಲವು ಗ್ರಾಮಗಳು ಭೌಗೋಳಿಕವಾಗಿ ಕಣ್ಮರೆಯಾಗಿವೆ. ಬೆಟ್ಟ ಶ್ರೇಣಿಗಳು ಕುಸಿದು ನದಿಗಳು ಹರಿಯುವ ದಿಕ್ಕನ್ನೇ ಬದಲಿಸಿವೆ. ಬೆಟ್ಟಗಳಿಂದ ತೊರೆಯಾಗಿ ಹರಿಯುತ್ತಿದ್ದ ಜಲಧಾರೆಗಳು ಭೂ ಕುಸಿತಕ್ಕೆ ಸಿಲುಕಿ ಜಲಪಾತಗಳಾಗಿ ಮಾರ್ಪಟ್ಟಿವೆ. ಇವು ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿದ ಕೆಲವು ಗ್ರಾಮಗಳ ವಾಸ್ತವ ಸ್ಥಿತಿ. ಆದರೆ ಮಡಿಕೇರಿಯಿಂದ 18ಕಿ.ಮೀ. ದೂರದಲ್ಲಿರುವ ಮರಗೋಡು ಹೊಸ್ಕೇರಿ ಗ್ರಾಮದಲ್ಲಿ ಯಾವುದೇ ಪ್ರಕೃತಿ ವಿಕೋಪ ಘಟಿಸಿಲ್ಲ. ಯಾವುದೇ ಬೆಟ್ಟ ಶ್ರೇಣಿಗಳೂ ಕುಸಿದು ಬಿದ್ದಿಲ್ಲ. ಹೀಗಿದ್ದರೂ…