ಮಂಡ್ಯ: ನಟ ಅಂಬರೀಶ್ ಅಂತಿಮಯಾತ್ರೆ ಹಲವು ವಿಶೇಷತೆಗಳಿಗೂ ಸಾಕ್ಷಿಯಾಯಿತು. ಅಪ್ಪನಂತೆ ಮಗನೂ ಸಹ ವಿಕಲಾಂಗನೋರ್ವನಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರೆ, ಭದ್ರತೆಯ ನಡುವೆಯೂ ಹೆಲಿಕಾಪ್ಟರ್ನತ್ತ ನುಗ್ಗಲೆತ್ನಿಸಿದ ವ್ಯಕ್ತಿಯೋರ್ವನಿಗೆ ಪೊಲೀಸರು ಗೂಸಾ ಕೊಟ್ಟ ಘಟನೆಯೂ ಜರುಗಿತು. ದುಖಃದಲ್ಲೂ ವಿಕಲಚೇತನನಿಗೆ ಹೆಲ್ಪ್..!? : ನಟ ಅಂಬರೀಶ್ ಇನ್ನು ನೆನಪು ಮಾತ್ರ. ಸಿನಿಮಾ, ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅವರು ಅವರದ್ದೇ ಛಾಪು ಮೂಡಿಸಿದ್ದರು. ಸ್ಟೈಲ್, ಮಾತು, ಸ್ನೇಹ, ಮಾನವೀಯತೆಗೆ ಅಂಬರೀಶ್ ಇನ್ನೊಂದು ಹೆಸರಾಗಿದ್ದರು. ಅಭಿಮಾನಿಗಳು ಅವರಿಗೆ ಕಲಿಯುಗದ ಕರ್ಣ…