ಮೈಸೂರು: ಕಳೆದ 70 ವರ್ಷಗಳಿಂದ ಕಾಶ್ಮೀರದಿಂದ ಪಾಕಿಸ್ತಾನಕ್ಕೆ ನೀರು-ರಕ್ತ ಹೊಳೆಯಾಗಿ ಹರಿದಿದೆ. ಈ ವೇಳೆ ಅನೇಕ ಮಹಾ ನಾಯಕರು ಎರಡು ದೇಶಗಳಲ್ಲಿ ಆಳ್ವಿಕೆ ನಡೆಸಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಮಾಜಿ ರಾಜತಾಂತ್ರಿಕ ಎ.ಎಸ್.ದುಲತ್ ಬೇಸರ ವ್ಯಕ್ತಪಡಿಸಿದರು. ನಜರ್ಬಾದ್ನ ಖಾಸಗಿ ಹೋಟೆಲ್ನಲ್ಲಿ ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ ವತಿಯಿಂದ ನಡೆದ ಮೈಸೂರು ಸಾಹಿತ್ಯ ಹಬ್ಬದಲ್ಲಿ `ಪ್ರಸ್ತುತ ಜಮ್ಮು-ಕಾಶ್ಮೀರ ರಾಜಕೀಯ ಸ್ಥಿತಿ-ಗತಿ’ ಕುರಿತು ಮಾತನಾಡಿದರು. ಭಾರತ ಮತ್ತು ಪಾಕಿಸ್ತಾನ ವಿಭಜನೆ ಆಗಿ…