ಕೆಟ್ಟು ನಿಂತಿರುವ ಇಂಜಿನ್… ಕಳೆ ಬೆಳೆದು ಮುಚ್ಚಿ ಹೋಗಿರುವ ರೈಲು ಹಳಿ ಹಾಳು ಕೊಂಪೆಯಂತಾಗಿರುವ ಜವಾಹರ್ ಬಾಲ ಭವನ ಆವರಣ ಮೈಸೂರು: ಒಂದು ಕಾಲದಲ್ಲಿ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಮೈಸೂರಿನ ಬನ್ನಿಮಂಟಪದ ಜವಾಹರ್ ಬಾಲ ಭವನ ಇಂದು ಪಾಳು ಬಿದ್ದ ಕೊಂಪೆಯಾಗಿದೆ. ಮಕ್ಕಳನ್ನು ಹೊತ್ತೊಯ್ದು ಸಂತಸಗೊಳಿಸುತ್ತಿದ್ದ ಬಾಲ ಭವನದ ಪುಟಾಣಿ ರೈಲು ಕೆಟ್ಟು ನಿಂತಿದೆ. ನ್ಯಾರೋ ಗೇಜ್ ರೈಲು ಹಳಿಗಳು ಕಳೆ ಬೆಳೆದು ಮುಚ್ಚಿಕೊಂಡಿವೆ. ಬಾಲ ಭವನದ ಇಡೀ ಆವರಣ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದನ್ನು…