ಮೈಸೂರು: ಕೆ.ಆರ್.ಆಸ್ಪತ್ರೆ ಆವರಣದ ನರ್ಸಿಂಗ್ ಹಾಸ್ಟೆಲ್ಗೆ ನುಗ್ಗಿದ ವಿಕೃತ ವ್ಯಕ್ತಿ ಸಿಕ್ಕಿಬಿದ್ದ ಪ್ರಕರಣ ಇನ್ನೂ ಮಾಸದಿರುವ ಬೆನ್ನಲ್ಲೇ ಮೈಸೂರಿನ ಕುವೆಂಪುನಗರದ ಬಿಸಿಎಂ ಮಹಿಳಾ ಹಾಸ್ಟೆಲ್ಗೆ ಖದೀಮನೋರ್ವ ನುಸುಳಿ ಆತಂಕ ಹುಟ್ಟಿಸಿರುವ ಘಟನೆ ಡಿಸೆಂಬರ್ 17 ರಂದು ನಡೆದಿದೆ.ಆದಿಚುಂಚನಗಿರಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮಹಿಳಾ ವಿದ್ಯಾರ್ಥಿನಿಲಯಕ್ಕೆ ಅಂದು ಮುಂಜಾನೆ 2.30 ಗಂಟೆ ವೇಳೆಗೆ ನುಸುಳಿದ ಖದೀಮ, ವಿದ್ಯಾರ್ಥಿನಿಯರ ಮೊಬೈಲ್ ಕಳವಿಗೆ ಯತ್ನಿಸಿದ. ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ತೆರಳುತ್ತಿದ್ದ ಆತನನ್ನು ಕಿಟಕಿ ಗಾಜಿನಿಂದ ಕಂಡ…