ನವದೆಹಲಿ, ಅ.24- ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾ ವಣಾ ಫಲಿತಾಂಶ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳೆಲ್ಲವನ್ನೂ ಸುಳ್ಳಾಗಿಸಿವೆ. ಮಹಾರಾಷ್ಟ್ರದ ಮತದಾರ ಬಿಜೆಪಿ ಮತ್ತು ಶಿವಸೇನೆ ಶಕ್ತಿಯನ್ನು ಕುಗ್ಗಿಸಿ ದ್ದರೂ ಆಡಳಿತ ನಡೆಸಲು ಮೈತ್ರಿಕೂಟಕ್ಕೆ ಮತ್ತೊಂದು ಅವಕಾಶ ನೀಡಿದ್ದಾನೆ. ಆದರೆ, ಹರಿಯಾಣದ ಜಾಟ್ ಸಮುದಾಯದವರು ಕೊಟ್ಟ ಏಟಿಗೆ ಬಿಜೆಪಿ ಅಕ್ಷರಶಃ ಕಳೆಗುಂದಿದೆ. ಅದೇ ವೇಳೆ ಕಾಂಗ್ರೆಸ್ ಸಾಮಥ್ರ್ಯ ಹೆಚ್ಚಿಸಿಕೊಂಡಿದೆ. ಜತೆಗೆ ಹೊಸ ಪಕ್ಷವೊಂದು ಉದಯವಾಗಿದೆ. ಆದರೆ, ಹರಿಯಾಣದಲ್ಲಿ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಅಗತ್ಯವಾದಷ್ಟು…