ಬೇಲೂರು: ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಈ ಹಿಂದಿನ ಅಧ್ಯಕ್ಷರಾಗಿದ್ದ ಹೆಚ್.ಎಂ.ದಯಾನಂದ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪತ್ರಕರ್ತ ಬಿ.ಎಂ.ರವೀಶ್ ನೇಮಕವಾಗಿದ್ದು, ಶನಿವಾರ ತಾಲೂಕಿನ ಹಲ್ಮಿಡಿ ಗ್ರಾಮದ ಕನ್ನಡ ಶಿಲಾ ಶಾಸನ ಪ್ರತಿಕೃತಿ ಮಂಟಪದ ಆವರಣದಲ್ಲಿ ಹಿಂದಿನ ಅಧ್ಯಕ್ಷ ಹೆಚ್.ಎಂ.ದಯಾನಂದ್ ನೂತನ ಅಧ್ಯಕ್ಷರಾದ ಬಿ.ಎಂ.ರವೀಶ್ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಪದಗ್ರಹಣ ಸಮಾರಂಭದ ಉದ್ಘಾಟನೆ ನಡೆಸಿ ಮಾತನಾಡಿದ ಶಾಸಕ ಕೆ.ಎಸ್. ಲಿಂಗೇಶ್, ನೂತನ ಅಧ್ಯಕ್ಷರ ಪದಗ್ರಹಣ ಬೇಲೂರು ಪಟ್ಟಣದಲ್ಲಿ ನಡೆಸುವ ಅವಕಾಶವಿತ್ತು. ಆದರೆ ಕನ್ನಡಕ್ಕೆ ಶಿಲಾ ಶಾಸನ…