ಭಾರತೀನಗರ: ಇಲ್ಲಿನ ಚಾಮುಂ ಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಯ ಪೂರ್ವಭಾವಿಯಾಗಿ ಬಾಯ್ಲರ್ಗೆ ಕಾರ್ಖಾನೆ ಉಪಾಧ್ಯಕ್ಷ ಎಸ್.ಬ್ರೀಟೋ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಪ್ರಸಕ್ತ ವರ್ಷ ಕಬ್ಬು ಅರೆಯಲು ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. ಹೀಗಾಗಿ ಕಾರ್ಖಾನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಇಂದು ಬಾಯ್ಲರ್ ಪೂಜೆ ಮಾಡಲಾಗಿದೆ. ನಂತರದ ದಿನಗಳಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು. ವ್ಯವಸ್ಥಾಪಕ ನಿರ್ದೇಶಕ ಎಂ.ಶ್ರೀನಿ ವಾಸ್ ಅವರು ಈ ಭಾಗದ ರೈತರ ಅನು ಕೂಲಕ್ಕಾಗಿ ಕಾರ್ಖಾನೆಯನ್ನು ನಿರ್ಮಿ ಸಿದ್ದು,…