ಭಾರತೀನಗರ: ನೂತನ ಸರ್ಕಾರ ಗೂಂಡಾ ವರ್ತನೆಗಳನ್ನು ತಡೆದು, ಸಮಾಜ ದಲ್ಲಿ ಕೋಮುಗಲಭೆ ಸೃಷ್ಟಿಸುವವರನ್ನು ಜೈಲಿಗಟ್ಟಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾ ಧ್ಯಕ್ಷ ಜಿ.ಎನ್.ನಾಗರಾಜು ಆಗ್ರಹಿಸಿದರು. ಇಲ್ಲಿನ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪ್ರಾಂತ ಕೃಷಿ ಕೂಲಿಕಾರರ ಸಂಘ ಸ್ವಾಗತಿಸುತ್ತದೆ. ಈ ಸರ್ಕಾರ ಗೂಂಡಾ ವರ್ತನೆಗಳನ್ನು ಮಟ್ಟಹಾಕಿ ಕೋಮು ಗಲಭೆಗಳನ್ನು ನಡೆ ಯದಂತೆ ನೋಡಿಕೊಳ್ಳುವುದರ ಜೊತೆಗೆ ದಲಿತರ ಮೇಲೆ, ಮಹಿಳೆಯರ…