ಮೈಸೂರು: ನಿಗದಿತ ಬಾಡಿಗೆ ನೀಡುತ್ತಿಲ್ಲವೆಂದು ಕಟ್ಟಡದ ಮಾಲೀಕ, ಏಕಾಏಕಿ ಅಂಗಡಿಗೆ ನುಗ್ಗಿ, ವಸ್ತುಗಳನ್ನೆಲ್ಲಾ ಹೊರಗೆಸೆದು, ಬೀಗ ಹಾಕಿದ ಕಾರಣ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಘಟನೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಕಟ್ಟಡದ ಮಾಲೀಕರಾದ ಕೋದಂಡರಾಮು ಅವರು, ಮಳಿಗೆಯೊಂದನ್ನು ದಯಾಶಂಕರ್ ಹಾಗೂ ರಾಜೇಶ್ ಅವರಿಗೆ ಬಾಡಿಗೆಗೆ ನೀಡಿದ್ದರು. ಸುಮಂಗಲಿ ಸಿಲ್ಕ್ ಹೆಸರಿನಡಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಇವರು ಮಾಸಿಕ 28 ಸಾವಿರ ರೂ. ಬಾಡಿಗೆ ನೀಡುತ್ತಿದ್ದರು. ಕೆಲ ತಿಂಗಳ ಹಿಂದೆ ಬಾಡಿಗೆ ಹೆಚ್ಚಿಸುವ…