ಗೋಣಿಕೊಪ್ಪಲು: ವಿಪರೀತ ಮಳೆ, ಗಾಳಿಯಿಂದ ಸಿಲುಕಿ ನರಕ ಯಾತನೆ ಅನುಭವಿಸಿದ ಹೆಬ್ಬಟ್ಟಗೇರಿ, ಮುಕ್ಕೋಡ್ಲು ಗ್ರಾಮದ ವಯೋವೃದ್ದ ಚಂದ್ರು ಎಂಬಾತ ಮೂರು ದಿನಗಳ ಕಾಲ ಕಾಡಿನಲ್ಲಿ ನಡೆದುಕೊಂಡೇ ಬಂದು, ಮುಖ್ಯರಸ್ತೆ ತಲುಪಿದ ನಂತರ ಸಿಕ್ಕಿದ ಟ್ರಕ್ ನಲ್ಲಿ ತನ್ನ ಅಳಿಯನ ಊರು ದೇವರಪುರಕ್ಕೆ ಆಗಮಿಸಿದ್ದಾರೆ. ವಯೋವೃದ್ಧನೊಂದಿಗೆ ಹೆಬ್ಬಟ್ಟಗೇರಿಯ ಅಕ್ಕಪಕ್ಕದ 40 ನಿವಾಸಿಗಳು ಸಹ ಆಗಮಿಸಿದ್ದು, ದೇವರಪುರದ ಅಂಬುಕೋಟೆಯಲ್ಲಿರುವ ಚಂದ್ರುವಿನ ಅಳಿಯ ವಿವೇಕ್ ಅವರ ಮನೆಯಲ್ಲಿ ಸದ್ಯಕ್ಕೆ ಆಶ್ರಯ ಪಡೆದಿದ್ದಾರೆ. ದಿಢೀರನೇ ಮನೆಗೆ ಆಗಮಿಸಿದ ಮಾವ ಹಾಗೂ 40 ಮಂದಿಗೆ…