ಮೈಸೂರು: ಮೈಸೂರಿನ ಡಿಎಫ್ಆರ್ಎಲ್ ವಸತಿ ಸಮುಚ್ಛಯದ 2 ಮನೆಗಳ ಬೀಗ ಮುರಿದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಡಿಎಫ್ಆರ್ಎಲ್ ಉದ್ಯೋಗಿಗಳಾದ ಗೋಪಾಲಕೃಷ್ಣ ಹಾಗೂ ಸಗಾಯ್ ದಾಸ್ ಅವರ ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿರುವ ಖದೀಮರು, ಶುಕ್ರವಾರ ತಡರಾತ್ರಿ ಬೀಗ ಮುರಿದು ಒಳನುಗ್ಗಿ, ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ. ಇವರಿಬ್ಬರೂ ಕುಟುಂಬ ಸಮೇತ ತಮ್ಮ ಊರಿಗೆ ಹೋಗಿದ್ದು, ಎಷ್ಟು ಮೌಲ್ಯದ ಚಿನ್ನಾಭರಣ ಹಾಗೂ ಹಣ ಕಳುವಾಗಿದೆ…