ಮೈಸೂರು: ಎಲ್ಲಾ ಕಾಲಘಟ್ಟಗಳಲ್ಲೂ ಕವಿಯಾದವನಿಗೆ ವಿಶೇಷ ಸ್ಥಾನಮಾನ ಇದ್ದು, ಪ್ರಸ್ತುತ ಸಮಾಜದ ಎಲ್ಲಾ ತಲ್ಲಣಗಳಿಗೆ ಸಾಹಿತ್ಯ ಪರಿಹಾರ ಒದಗಿಸಬಲ್ಲದು ಎಂದು ಸಾಹಿತಿ ಡಾ.ಸಿ.ನಾಗಣ್ಣ ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಕೆ.ಗೋವಿಂದರಾಜು ಅವರ `ನಾವೆಲ್ಲರೂ ದುಃಖದ ಮಕ್ಕಳು’ ಕವಿತೆಯ ಓದು-ಸಂವಾದದ ಚಕೋರ-101ರ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ನಿಜವಾದ ಕವಿಯಾದವನಿಗೆ ಎಲ್ಲಾ ಕಾಲದಲ್ಲೂ ವಿಶಿಷ್ಟ ಸ್ಥಾನ ಇದ್ದೇ ಇರುತ್ತದೆ. ಗೌರವಪೂರ್ವಕ ಸ್ಥಾನಮಾನ…