ಮೈಸೂರು: ರಾಮಾಯಣ ಕುರಿತಾದ `ಉತ್ತರ ಕಾಂಡ’ ಕಾದಂಬರಿ ಸೃಷ್ಟಿಗೆ ಆಕಸ್ಮಿಕವಾಗಿ ಸಿಕ್ಕ ಜಿಂಕೆಯ ಚಿತ್ರವೇ ಮೂಲ ಪ್ರೇರಣೆ ಎಂದು ಕಾದಂಬರಿ ಕತೃ ಡಾ.ಎಸ್.ಎಲ್. ಭೈರಪ್ಪನವರೇ ಸ್ವತಃ ತಿಳಿಸಿದ್ದಾರೆ. ಮೈಸೂರಿನ ಶಾರದಾ ವಿಲಾಸ ಕಾಲೇಜು ಶತ ಮಾನೋತ್ಸವ ಭವನದಲ್ಲಿ ಭಾನುವಾರ, ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಿದ್ದ `ಉತ್ತರ ಕಾಂಡ’ ಕಾದಂಬರಿ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಿದ ಅವರು, ಕಾದಂಬರಿ ಸೃಷ್ಟಿಗೆ ಪ್ರೇರಣೆಯಾದ ಜಿಂಕೆ ಚಿತ್ರವನ್ನು ಪ್ರದರ್ಶಿಸಿ, ಹೀಗೆ ವಿವರಿಸಿದರು. ಆರು ವರ್ಷದ ಹಿಂದೆ ಇಂಗ್ಲೆಂಡ್…