ಮೈಸೂರು: 12 ವರ್ಷಗಳ ಹಿಂದೆ ಬಿದ್ದು ಬಲಗಾಲಿನ ತೊಡೆಯ ಮೂಳೆ ಮುರಿತದಿಂದ ಕಂಗಾಲಾಗಿದ್ದ ಯುವಕನೊಬ್ಬನಿಗೆ ಶಸ್ತ್ರಚಿಕಿತ್ಸೆ ಮೂಲಕ ಆತ ಸಹಜವಾಗಿ ನಡೆದಾಡುವಂತೆ ಮಾಡುವಲ್ಲಿ ಮೈಸೂರಿನ ಕೀಲು ಮತ್ತು ಮೂಳೆ ತಜ್ಞ ಡಾ.ಟಿ.ಮಂಜುನಾಥ್ ಯಶಸ್ವಿಯಾಗಿದ್ದಾರೆ. ಕೃಷ್ಣರಾಜಸಾಗರದ ಪವನ್ಕುಮಾರ್ (17) 5 ವರ್ಷದ ಬಾಲಕನಾಗಿದ್ದಾಗ ಬಿದ್ದು ತೊಡೆಗೆ ಪೆಟ್ಟಾಗಿತ್ತು. ಮೂಳೆ ಮುರಿದಿತ್ತು. 3 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ ಸರಿಯಾಗಿ ಮೂಳೆಗಳು ಬೆಳವಣಿಗೆಯಾಗದೆ 20 ಸೆಂಟಿಮೀಟರ್ನಷ್ಟು ಕಾಲು ಬೆಳೆಯದೇ ಅಂಗವೈಕಲ್ಯತೆಗೆ ಒಳಗಾಗಿದ್ದ. ಪೇಯಿಂಟಿಂಗ್ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ಆತನ ತಂದೆ…