ಮೈಸೂರು: ಸರ್.ಎಂ. ವಿಶ್ವೇಶ್ವರಯ್ಯ ಅವರು ನೀಡಿರುವ ಕೊಡುಗೆಗೆ ಯಾವ ಪ್ರಶಸ್ತಿಯನ್ನು ನೀಡಿದರೂ ಕಡಿಮೆ ಎಂದು ಬಾಹ್ಯಾಕಾಶ ಆಯೋಗದ ಸದಸ್ಯ ಎ.ಎಸ್.ಕಿರಣ್ಕುಮಾರ್ ಅಭಿಪ್ರಾಯಪಟ್ಟರು. ನಗರದ ಜೆಎಲ್ಬಿ ರಸ್ತೆಯ ದಿ ಇನ್ಸ್ಟಿ ಟೂಷನ್ ಆಫ್ ಇಂಜಿನಿಯರಿಂಗ್ (ಇಂಡಿಯಾ) ಸಂಸ್ಥೆ ವತಿಯಿಂದ ಸರ್ಎಂವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 51ನೇ ಇಂಜಿನಿಯರುಗಳ ದಿನಾಚರಣೆ ಮತ್ತು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ ಎಂ.ವಿ. ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ, ಅವರು ಮಾತನಾಡಿದರು. ನಮ್ಮ ದೇಶ ಕಂಡ ಅದ್ಭುತ…