ಮೈಸೂರು: ಮಹಿಳಾ ಕಕ್ಷಿದಾರರೊಬ್ಬರಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಆದೇಶ ಮೇರೆಗೆ ದೊರೆತ್ತಿದ್ದ ಪರಿಹಾರ ಹಣವನ್ನು ನಕಲಿ ಮೂಲಕ ತಮ್ಮ ಖಾತೆ ವರ್ಗಾಯಿಸಿ ಕೊಂಡು ವಂಚಿಸಿದ ಪ್ರಕರಣದಲ್ಲಿ ಹಿರಿಯ ವಕೀಲ ಆರ್.ಜಿ. ನರಸಿಂಹ ಅಯ್ಯಂಗಾರ್ ಅವರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆÀ ನ.15 ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿ, ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಮೈಸೂರಿನ ನಾಡನಹಳ್ಳಿ ನಿವಾಸಿ ಎಂ.ಬಿ.ಪಾರ್ವತಿ (ಟಿನಿ ಬಿದ್ದಪ್ಪ) ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನರಸಿಂಹ…