ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೆ ನಿರಂತರ ಹೋರಾಟ ಮೈಸೂರು: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕುವವರೆಗೂ ನಿರಂ ತರವಾಗಿ ಸಾಮಾಜಿಕ ಹಾಗೂ ಕಾನೂ ನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಚಾಮರಾಜನಗರ ಘಟಕದ ಗೌರವಾಧ್ಯಕ್ಷ ರಾದ ಮುಡಿಗುಂಡ ವಿರಕ್ತಮಠದ ಶ್ರೀ ಶ್ರೀಕಂಠಮಹಾಸ್ವಾಮೀಜಿ ಘೋಷಿಸಿದರು. ಮೈಸೂರಿನ ಹೊಸಮಠ ಆವರಣದಲ್ಲಿ ಭಾನುವಾರ ನಡೆದ ಜಾಗತಿಕ ಲಿಂಗಾ ಯತ ಮಹಾಸಭಾದ ಮೈಸೂರು ಜಿಲ್ಲಾ ಘಟಕ ಉದ್ಘಾಟನೆ ಸಮಾರಂಭದಲ್ಲಿ `ಲಿಂಗಾ ಯತ ಹೋರಾಟ: ಪ್ರಶ್ನೆ-ಪರಿಹಾರ’ ಕೃತಿಯನ್ನು ಬಿಡುಗಡೆ ಮಾಡಿ ಮಾತ…