ಮಂಡ್ಯ: ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಶ್ರೀರಂಗಟಪ್ಟಣ ತಾಲೂಕಿನ ದೊಡ್ಡೇ ಗೌಡನ ಕೊಪ್ಪಲು ಬಳಿಯ ಪುರಾತನ ಪ್ರಸಿದ್ಧ ಕ್ಷೇತ್ರ ಗೌತಮ ಕ್ಷೇತ್ರ ಜಲಾವೃತ ಗೊಂಡಿದೆ. ಕಾವೇರಿ ನದಿ ತೀರದಲ್ಲಿರುವ ಗೌತಮ ಕ್ಷೇತ್ರದ ಮಠ ಜಲಾವೃತ ಗೊಂಡಿದ್ದರೂ, ಇಲ್ಲಿನ ಶ್ರೀಗಜಾನನ ಸ್ವಾಮೀಜಿ ಗಳು ತಮ್ಮ ಮೂವರು ಭಕ್ತರೊಂದಿಗೆ ಮಠದಲ್ಲೇ ಇರುವುದು ಆತಂಕ ಸೃಷ್ಟಿಸಿದೆ. ಇಂದು ಅಥವಾ ನಾಳೆ ಜಲಾಶಯದಿಂದ ನದಿಗೆ ಮತ್ತಷ್ಟು ಪ್ರಮಾಣದಲ್ಲಿ ನೀರು ಹರಿದು ಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ ಮಠದಿಂದ ಸ್ವಾಮೀಜಿ ಅವರನ್ನು ಹೊರತರಲು ಜಿಲ್ಲಾಡಳಿತ ಪ್ರಯತ್ನ…