ಗುಂಡ್ಲುಪೇಟೆ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಿಂದ ತಮಿಳುನಾಡಿನತ್ತ ತೆರಳುವ ಎಲ್ಲಾ ವಾಹನಗಳನ್ನೂ ಕರ್ನ ಟಕದ ಗಡಿಭಾಗವಾದ ಕೆಕ್ಕನಹಳ್ಳ ಪ್ರದೇಶದಲ್ಲಿ ಸಂಜೆಯವರೆವಿಗೂ ತಡೆ ಹಿಡಿಯಲಾಯಿತು. ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಮೇಲುಕಾಮನಹಳ್ಳಿ ಹಾಗೂ ಕೆಕ್ಕನ ಹಳ್ಳ ಚೆಕ್ ಪೋಸ್ಟ್ ಬಳಿ ಬೆಳಗ್ಗಿನಿಂದಲೇ ಎಲ್ಲಾ ವಾಹನಗಳನ್ನೂ ತಡೆ ಹಿಡಿಯಲಾಯಿತು. ಇದರಿಂದ ಸುಮಾರು ಮೂರು ಕಿಲೋ ಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳನ್ನು ತಡೆದಿದ್ದರಿಂದ ಈ ಮಾರ್ಗದಲ್ಲಿ ಹೊರಟಿದ್ದ ಪ್ರವಾಸಿಗರು ಆಹಾರಕ್ಕಾಗಿ ಪರದಾಡುವಂತಾಯಿತು. ಸಾರಿಗೆ ಬಸ್ಸುಗಳ…