* ಒಂದೇ ದಿನದಲ್ಲಿ 2 ಘಟನೆ * ಒಟ್ಟು 3.25 ಲಕ್ಷ ರೂ. ಚಿನ್ನಾಭರಣ ಅಪಹರಣ * ಗೃಹಿಣಿಯರೇ ಟಾರ್ಗೆಟ್ * ನಾಗರಿಕರಲ್ಲಿ ಕಳವಳ ಅರಸೀಕೆರೆ: ಅರಸೀಕೆರೆ ಪಟ್ಟಣದಲ್ಲಿ ಚಿನ್ನಾ ಭರಣ ಕಳ್ಳರ ಕಾಟ ಮಿತಿಮೀರಿದೆ. ಒಂದೇ ದಿನದಲ್ಲಿ ನಡೆದ 2 ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರು ಒಟ್ಟು 3.25 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳೆದು ಕೊಂಡಿದ್ದಾರೆ. ಒಂದೆಡೆ ವಾಯುವಿಹಾರ ಮಾಡುತ್ತಿದ್ದ ಗೃಹಿಣಿಯ ಮಾಂಗಲ್ಯಸರ ಕಿತ್ತೊಯ್ದಿದ್ದರೆ, ಇನ್ನೊಂದೆಡೆ ಬಸ್ ಹತ್ತುತ್ತಿದ್ದ ಗೃಹಿಣಿಯ ಬ್ಯಾಗ್ನಿಂದ ಚಿನ್ನಾಭರಣ ಕದಿಯಲಾಗಿದೆ….
ಕೊಳಕು ಮಂಡಲ ಹಾವನ್ನು ನುಂಗಿದ ನಾಗರಹಾವು…!
June 10, 2019ಅಚ್ಚರಿಗೊಳ್ಳುತ್ತಲೇ ಮೊಬೈಲ್ನಲ್ಲಿ ವಿಡಿಯೊ ಚಿತ್ರೀಕರಿಸಿದ ಹಾಸನ ಜನತೆ ಹಾಸನ: ಹಾಸನ ನಗರದ ನಾಗರಿಕರು ವಾರಾಂತ್ಯದ ದಿನವಾದ ಭಾನುವಾರ ನ್ಯಾಷನಲ್ ಜಿಯಾಗ್ರಫಿ ಟಿವಿ ಚಾನೆಲ್ನಲ್ಲಿ ಪ್ರಸಾರವಾಗುವಂತಹ ಅಪರೂಪದ ದೃಶ್ಯವನ್ನು ನೇರವಾಗಿ ವೀಕ್ಷಿಸಿ ಅಚ್ಚರಿಗೊಂಡರು. ನಾಗರಹಾವಿನ ಮಧ್ಯಾಹ್ನದ ಭೋಜನ ದೃಶ್ಯವನ್ನು ಕಣ್ತುಂಬಿಕೊಂಡರು. ನಗರದಲ್ಲಿ ಮಾರುದ್ದದ ನಾಗರಹಾವೊಂದು ಕೊಳಕು ಮಂಡಲ ಹಾವನ್ನು ಇಡೀ ಆಗಿ ನುಂಗಿ ಹಸಿವು ಇಂಗಿಸಿಕೊಂಡಿದ್ದನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯಚಕಿತರಾದರು. 6-7 ನಿಮಿಷಗಳ ಕಾಲ ನಡೆದ ಉರುಗರಾಯನ ಈ ಆಹಾರ ಸೇವನೆ ದೃಶ್ಯವನ್ನು ಮೊಬೈಲ್ಗಳಲ್ಲಿ ವೀಡಿಯೊ…
ವಾಯುಪಡೆ ಯೋಧ, ಆಲೂರಿನ ಮೋಹನ್ಕುಮಾರ್ ಆತ್ಮಹತ್ಯೆ
June 10, 2019ಹರಿಯಾಣದ ಶಿರಸಾ ಕ್ಯಾಂಪ್ ನಲ್ಲಿ ರೈಫಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಆಲೂರು: ಹಾಸನ ಜಿಲ್ಲೆ ಆಲೂರು ತಾಲೂಕಿನ ಯುವ ಯೋಧ ರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರದಲ್ಲಿ ತಾಯಿ ಮತ್ತು ಪತ್ನಿಯ ಕ್ಷಮೆ ಕೋರಿದ್ದಾರೆ. ಹರಿಯಾಣದಲ್ಲಿ ಭಾರತೀಯ ವಾಯು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕದಾಳು ನಿವಾಸಿ ಪುತ್ರ ಮೋಹನ್ ಕುಮಾರ್(28) ಶುಕ್ರವಾರ ಸಂಜೆ ತಮ್ಮದೇ ಸರ್ವಿಸ್ ಬಂದೂಕಿನಿಂದ ತಲೆಗೆ ಗುಂಡು…
ಕುಸಿದ ಬಾಣಾವರ ಕೋಟೆ ಗೋಡೆ
June 10, 2019ಅರಸೀಕೆರೆ: ತಾಲೂಕಿನ ಬಾಣಾವರ ಪಟ್ಟಣದ ಲ್ಲಿರುವ ಪಾಳೆಗಾರರ ಕಾಲದ ಕೋಟೆಯ ಗೋಡೆಯ ಒಂದು ಭಾಗ ಕುಸಿದಿದ್ದು, ಕೋಟೆ ಶಿಥಿಲವಾಗುತ್ತಿದೆ ಎಂದು ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಸಾವಿರ ವರ್ಷಗಳ ಹಿಂದಿನ ಈ ಕೋಟೆಯ ಗೋಡೆಯು ಕೆಲವೆಡೆ ಶಿಥಿಲವಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ಗೋಡೆಯ ಒಂದು ಪಾಶ್ರ್ವ ಕುಸಿದು ಬಿದ್ದಿದೆ. ಐತಿಹಾಸಿಕ ಸ್ಮಾರಕವನ್ನು ಪುರಾತತ್ವ ಇಲಾಖೆಯವರು ತಕ್ಷಣವೇ ದುರಸ್ತಿಪಡಿಸಬೇಕು. ಕೋಟೆಯ ಉಳಿದ ಭಾಗವನ್ನೂ ಸಂರಕ್ಷಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. 10ನೇ ಶತಮಾನದಲ್ಲಿ ಹೊಯ್ಸಳ ಅರಸರ ಕಾಲದಲ್ಲಿ ಈ ಕೋಟೆ ನಿರ್ಮಿತವಾಗಿದೆ….
ಸಂಪನ್ಮೂಲವಿದ್ದೂ ಬಡತನ, ತೆರಿಗೆ ಸಂಗ್ರಹದಲ್ಲಿ ಹಿನ್ನಡೆ; ಹಾಸನ ನಗರಸಭೆ ವಿಶೇಷ
June 10, 2019ಹಾಸನ: ಹಾಸನ ಎಂದರೆ ಸಾಮಾನ್ಯವಲ್ಲ, ಐತಿಹಾಸಿಕ, ಆಕರ್ಷಕ ಪ್ರವಾಸಿ ತಾಣಗಳಿಂದಾಗಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆ. ಒಂದು ಮೂಲೆಯಲ್ಲಿ ಕಾಫಿ, ಇನ್ನೊಂದು ಮೂಲೆಯಲ್ಲಿ ಮಿಡಿಸೌತೆ, ಇನ್ನೊಂದೆಡೆ ಕೊಬ್ಬರಿ, ಮತ್ತೊಂದೆಡೆ ತಂಬಾಕು, ನಡುವೆ ಆಲೂಗಡ್ಡೆ… ಹಾಗಾಗಿ ಕೃಷಿಯಲ್ಲಿ ಶ್ರೀಮಂತ ಜಿಲ್ಲೆ ಎಂಬ ಹೆಗ್ಗಳಿಕೆ. ಆದರೆ, ಅಭಿವೃದ್ಧಿ ಯಲ್ಲಿ ಸಮಗ್ರತೆ ಇಲ್ಲ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲೂ ಬಹಳಷ್ಟು ಏರುಪೇರು ಎಂಬ ಆರೋಪ, ಅಸಮಾಧಾನದ ಮಾತುಗಳಿವೆ. ಹಾಸನದ ನಗರಸಭೆಯೂ ಇದಕ್ಕೆ ಹೊರತಾಗಿಲ್ಲ. ಅದು ಈ ಬಾರಿ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿದೆ….
ಸರಕಾರಿ ಶಾಲೆಗೆ ಬಂದ ಮಕ್ಕಳಿಗೆ ಕುದುರೆ ಗಾಡಿಯಲ್ಲಿ ಮೆರವಣಿಗೆ!
June 5, 2019ಹಾಸನ: ನಗರದ ಹೊರವಲಯ ದಲ್ಲಿರುವ ಹನುಮಂತಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ಸೇರ್ಪಡೆಯಾದ ಮಕ್ಕಳ ಪಾಲಿಗೆ ಮಂಗಳವಾರ ಎಂದಿನಂತಿರಲಿಲ್ಲ. ಶಾಲೆಗೆ ಹೊರಟು ಬಂದ ಅವರನ್ನೆಲ್ಲಾ ಕುದುರೆ ಗಾಡಿಯಲ್ಲಿ ಮೆರವಣಿಗೆ ಮಾಡಿ ಶಾಲೆಗೆ ಅದ್ಧೂರಿಯಾಗಿ ಕರೆ ತರಲಾ ಯಿತು. ಜತೆಗೆ ಪೂರ್ಣಕುಂಭ ಕಳಶದ ಸ್ವಾಗತವೂ ಮಕ್ಕಳಿಗೆ ದೊರೆಯಿತು. ಇದನ್ನೆಲ್ಲಾ ಕಂಡು ಮಕ್ಕಳು ಹಿರಿಹಿರಿ ಹಿಗ್ಗಿದರು. ಕುದುರೆ ಗಾಡಿಯಲ್ಲಿ ಕುಳಿತು ಕೇಕೆ ಹಾಕಿ ನಕ್ಕರು. ಮಕ್ಕಳನ್ನು ಕುದುರೆ ಗಾಡಿಯಲ್ಲಿ ಕುಳ್ಳಿರಿಸಿದ ಶಿಕ್ಷಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದರು….
ಸಮಗ್ರ ಕೃಷಿ ಅಭಿವೃದ್ಧಿಗೆ ಯೋಜನೆ ರೂಪಿಸಿ
June 5, 2019ಜಿಪಂ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಶ್ವೇತಾ ನಿರ್ದೇಶನ ಹಾಸನ: ಜಿಲ್ಲೆಯಲ್ಲಿ ಸಂಯೋಜಿತ ಬೇಸಾಯದ ಮೂಲಕ ಸಮಗ್ರ ಕೃಷಿ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕಾದ ತುರ್ತು ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಹೇಳಿದ್ದಾರೆ. ಜಿಪಂನ ಹೊಯ್ಸಳ ಸಭಾಂಗಣದಲ್ಲಿ ಮಂಗಳ ವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೃಷಿ ಮತ್ತು ತೋಟಗಾರಿಕೆ ಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿ ಸಲು ರೈತರಿಗೆ ಪೂರಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಿದೆ. ಅಲ್ಲದೇ ಕಾಲಕಾಲಕ್ಕೆ ಸೂಕ್ತ ಮಾರ್ಗ…
94ನೇ ದಿನಕ್ಕೆ ಕಾಲಿಟ್ಟ ಮಿನರ್ವ ಮಿಲ್ ಕಾರ್ಮಿಕರ ಮುಷ್ಕರ
June 5, 2019ಪ್ರತಿಭಟನಾ ಸ್ಥಳಕ್ಕೆ ಶಾಸಕ ಪ್ರೀತಂ ಗೌಡ ಭೇಟಿ ಹಾಸನ: ನಗರದ ಹೊರವಲಯ ಹನುಮಂತಪುರ ಬಳಿ ಇರುವ ನ್ಯೂ ಮಿನರ್ವ ಮಿಲ್ನ ಕಾರ್ಮಿಕರು ವೇತನ ಒಪ್ಪಂದ ಕುರಿತು ನಡೆಸುತ್ತಿರುವ ಮುಷ್ಕರ ಮಂಗಳವಾರ 94ನೇ ದಿನಕ್ಕೆ ಕಾಲಿಟ್ಟಿತು. ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕ ಮುಖಂಡರ ಜತೆ ಚರ್ಚಿಸಿದರು. ಬಳಿಕ ಶಾಸಕರು ಮಿನರ್ವ ಮಿಲ್ನ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿದರು. ಇಲ್ಲಿನ ಕಾರ್ಮಿಕರ ಸಮಸ್ಯೆಯನ್ನು ನೂತನ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರ ಗಮನಕ್ಕೆ…
ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಎಟಿಆರ್ ಸೂಚನೆ
June 5, 2019* ರಾಮನಾಥಪುರ-ಬೆಟ್ಟದಪುರ ಸಂಪರ್ಕ ರಸ್ತೆ ಕಾಮಗಾರಿ ಬಾಕಿ: ಸ್ಥಳೀಯರ ಅಸಮಾಧಾನ * ಸ್ಥಳಕ್ಕೆ ಕೆಆರ್ಡಿಸಿಎಲ್ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರÀನ್ನು ಕರೆದೊಯ್ದಿದ್ದ ಶಾಸಕ ರಾಮನಾಥಪುರ: ಅರಕಲ ಗೂಡು, ರಾಮನಾಥಪುರ ಮಾರ್ಗ ಬೆಟ್ಟದ ಪುರಕ್ಕೆ ಹಾದು ಹೋಗಿರುವ ಮುಖ್ಯರಸ್ತೆಯ ಲ್ಲಿನ ಸಮಸ್ಯೆಗಳ ಕುರಿತು ಸಾರ್ವಜನಿಕರ ಅಹವಾಲುಗಳನ್ನು ಆಲಿಸುವ ಉದ್ದೇಶದಿಂದ ಜನರ ಬಳಿಗೇ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (ಕೆಅರ್ಡಿಸಿಎಲ್) ಹಾಸನ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿ ಗಳನ್ನು ಶಾಸಕ ಎ.ಟಿ.ರಾಮಸ್ವಾಮಿ ಮಂಗಳ…
ನೆನೆಗುದಿಗೆ ಬಿದ್ದಿರುವ ಕಾಮಗಾರಿ ತ್ವರಿತ ಅನುಷ್ಠಾನ
June 2, 2019ಜಿಲ್ಲಾಧಿಕಾರಿ ಕಚೇರಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಸ್ಪಷ್ಟ ನಿರ್ದೇಶನ ಹಾಸನ: ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವ ಹಿಸುವುದರ ಜೊತೆಗೇ, ನೆನೆಗುದಿಗೆ ಬಿದ್ದಿ ರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮಂಜೂರಾ ಗಿರುವ ಹೊಸ ಯೋಜನೆಗಳನ್ನೂ ಶೀಘ್ರ ವಾಗಿ ಅನುಷ್ಠಾನಗೊಳಿಸಿ ಎಂದು ಲೋಕೋಪ ಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ…